ಸಂತ ಶ್ರೀ ಜಗನ್ನಾಥ ಮಹಾರಾಜ

Author : ಎಂ.ಜಿ. ದೇಶಪಾಂಡೆ

Pages 200

₹ 120.00




Year of Publication: 2010
Published by: ಪೂಜಾ ಪ್ರಿಂಟರ್ಸ್
Address: ಬಚ್ಚಾ ಕಾಂಪ್ಲೆಕ್ಸ್, ಸಂಗಮ ಚಿತ್ರಮಂದಿರ ಹತ್ತಿರ, ಬೀದರ-585401
Phone: 9241632056

Synopsys

ಖ್ಯಾತ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ-ಸಂತ ಶ್ರೀ ಜಗನ್ನಾಥ ಮಹಾರಾಜ. ಈ ಸಂತರ ಜೀವನ ಚರಿತ್ರೆ ಇದು. ಇವರು ಕರ್ನಾಟಕ ದಲ್ಲಿನ ಬೀದರ್ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದವರು . ಗೃಹಸ್ಥರಾಗಿ ನಂತರ ಆಧ್ಯಾತ್ಮ ಮಾರ್ಗದಲ್ಲಿ ತಮ್ಮನ್ನು ರೂಢಿಸಿಕೊಂಡು ಸಂತರಾಗಿ ಬೆಳಗುತ್ತಿದ್ದಾರೆ. ಇವರು ಕರ್ನಾಟಕ ದ ಹೊಕ್ರಾಣಾ ಬಿ ಮತ್ತು ಸ್ಥಳೀಯ ಬೀದರ್ ಅಲ್ಲದೆ ತೆಲಂಗಾಣದ ದೇವರ ಕಂದಿ ಗ್ರಾಮದಲ್ಲಿ ಮಂದಿರಗಳನ್ನು ಸ್ಥಾಪಿಸಿದ್ದಾರೆ. ಶ್ರೀ ದತ್ತಾತ್ರೇಯ ಮೂರ್ತಿ, ಭೀಮಾ ಶಂಕರ ಮೂರ್ತಿ ,ಮಾರುತಿರಾಯ ,ನವಗ್ರಹ ,ನವನಾಥ , ಶ್ರೀದೇವಿ ,ಶ್ರೀ ಪಾಂಡುರಂಗ ವಿಠ್ಠಲ ಹೀಗೆ ಸನಾತನ ಧರ್ಮದ ಹಲವು ಮೂರ್ತಿಗಳನ್ನು ಈ ಮಂದಿರಗಳಲ್ಲಿ ಪ್ರತಿಷ್ಠಾಪನೆಗೊಳಿಸಿದ್ದಾರೆ . ಪ್ರತಿವರ್ಷ ಈ ಮೂರು ಮಂದಿರಗಳಲ್ಲಿ ಜಾತ್ರಾ ಉತ್ಸವಗಳು ನಡೆಯುತ್ತವೆ . ಈ ಜಾತ್ರೆಗಳಲ್ಲಿ ಆಂಧ್ರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಅನೇಕ ಭಾವಿಕ ಭಕ್ತರು ಪಾಲ್ಗೊಳ್ಳುತ್ತಾರೆ. ಸಂತ ಶ್ರೀಯುತರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಮೀಸಲಿಟ್ಟು ಲೋಕಕಲ್ಯಾಣಕ್ಕಾಗಿ ತೊಡಗಿಸಿಕೊಂಡಿದ್ದಾರೆ . ಇಂಥ ಮಾನವೀಯ ಮೌಲ್ಯ ತುಂಬಿಕೊಂಡ ಸಂತ ಶ್ರೀ ಜಗನಾಥ ಮಹಾರಾಜರ ಜೀವನ ಚರಿತ್ರೆ ಇಲ್ಲಿ ರೂಪಿಸಲಾಗಿದೆ .ಒಟ್ಟು ಐವತ್ತು ಮೂರು ಅಧ್ಯಾಯಗಳು ಇವೆ .ಕೊನೆಗೆ ಶ್ರೀ ಜಗನಾಥ ಮಹಾರಾಜರ ಕುರಿತಂತೆ ಆರತಿ ಪದವನ್ನು ಹೆಣೆಯಲಾಗಿದೆ. ಒಟ್ಟಾರೆ ಇದೊಂದು ಆಧ್ಯಾತ್ಮ ಗ್ರಂಥ .

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books