ಸಂತ ಶ್ರೀ ತುಕಾರಾಮ ಸಂತ ಶ್ರೀ ನಾರಹರಿ ಸೋನಾರ ಅಭಂಗಗಳು

Author : ಸರಿತಾ ಜ್ಞಾನಾನಂದ

Pages 100

₹ 75.00




Year of Publication: 2017
Published by: ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ
Address: 3ನೇ ಅಡ್ಡರಸ್ತೆ, ಚೇತನಾ ಕಾಲನಿ ವಿದ್ಯಾನಗರ, ಹುಬ್ಬಳ್ಳಿ-580021.

Synopsys

'ಸಂತ ಶ್ರೀ ತುಕಾರಾಮ ಸಂತ ಶ್ರೀ ನಾರಹರಿ ಸೋನಾರ ಅಭಂಗಗಳು' ಉದ್ಗ್ರಂಥವನ್ನು ಲೇಖಕಿ ಸರಿತಾ ಜ್ಞಾನಾನಂದ ಅವರು ರಚಿಸಿದ್ದಾರೆ. ವೈಶ್ವಕರ್ಮನ ಸಾಹಿತ್ಯ ಮರಾಠಿಯಲ್ಲಿ ಹೇರಳವಾಗಿದ್ದು ಅದು ಪೂರ್ಣವಾಗಿ ಭಾಷಾಂತರಗೊಂಡಿಲ್ಲ. ಅನ್ಯ ಪ್ರಖ್ಯಾತ ಪಂಡಿತ ಬಾಳಶಾಸ್ತ್ರಿ ಕ್ಷೀರಸಾಗರ ಅವರ ವಿಶ್ವಬ್ರಹ್ಮ ಕುಲೋತ್ಸಾಹ ಎಂಬ ಉದ್ಗ್ರಂಥದ ಐದು ಭಾಗಗಳು ಕನ್ನಡಕ್ಕೆ ಅನುವಾದಿತವಾಗಿ ವೈಶ್ವಕರ್ಮನ ಸಂಪ್ರದಾಯ, ಸಂಸ್ಕಾರ, ಪಾರಮ್ಯಗಳ ಬಗ್ಗೆ ಶಾಸ್ತ್ರೋಕ್ತವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ.ಇಲ್ಲಿನ ಅಭಂಗಗಳಲ್ಲಿ ವಿಶ್ವಕರ್ಮ ಪ್ರಭುವಿನ ವರ್ಣನೆ, ವೇದೋಪನಿಷತ್ತುಗಳಲ್ಲಿ ಬಂದ ಪ್ರಸ್ತಾವನೆ, ವಂಶಜರಾದ ವಿಶ್ವಕರ್ಮರ ಸಾಮಾಜಿಕ, ಪಾರಮ್ಯ ಮುಂತಾದವುಗಳು ಬಹುವಿಸ್ತೃತವಾಗಿ ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದು ಕೃತಿಯ ಬೆನ್ನುಡಿಯಲ್ಲಿ ಕವಿ, ಸಾಹಿತಿ ನರಸಿಂಗರಾವ ಮೋ. ಹೇಮನೂರ ಅವರು ಬರೆದಿದ್ದಾರೆ.

About the Author

ಸರಿತಾ ಜ್ಞಾನಾನಂದ
(21 January 1943)

ಸರಿತಾ ಜ್ಞಾನಾನಂದ ಅವರು ಮೂಲತಃ ಬೆಂಗಳೂರಿನವರು. ತಂದೆ- ಎನ್. ಆರ್. ನಂಜುಂಡಸ್ವಾಮಿ, ತಾಯಿ- ಸುಬ್ಬಮ್ಮ. 21-01-1943ರಲ್ಲಿ ಜನಿಸಿದ ಅವರು ಅಧ್ಯಾಪಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸರಿತಾ ಜ್ಞಾನಾನಂದ ಅವರು ಒಂದೂರಲ್ಲಿ ಒಬ್ಬ ನಿರ್ಮಲಾ, ಪರಿಪೂರ್ಣ, ತನ್ನ ಮೀನು-ತಾನಾದ, ಬೆಂಕಿ ಹೂ, ಪಾಕಿಸ್ತಾನದಲ್ಲಿ ಶಂಕರ್ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿಯೂ ಕೃಷಿ ಮಾಡಿರುವ ಅವರು ವಿದಾಯ, ವಿಷಗರ್ಭ, ಪ್ರಕೃತಿ ಸಂಶೋಧನೆ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಜೊತೆಗೆ ಹೆಣ್ಣೆ ಹೆಚ್ಚು ಎಂಬ ನಾಟಕನ್ನು ರಚಿಸಿರುವ ಅವರು ಆಚಾರ್ಯಾಭಿವಂದನೆ, ಕಲಾರಾಧನೆ ...

READ MORE

Related Books