ಸಂತುಷ್ಟಿ

Author : ಪ್ರಣತಾರ್ತಿಹರನ್

Pages 82

₹ 25.00




Year of Publication: 1997
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ಸಂಕೇತಿ ಸಮುದಾಯದ ಹಬ್ಬಗಳ ಆಚರಣೆಯ ಅನುಭವಪೂರ್ಣ ವಿವರಗಳಿಗೆ ಸಂಬಂಧಿಸಿದ ಪುಸ್ತಕ -ಸಂತುಷ್ಟಿ. ಹಬ್ಬಗಳ ಸರ್ವತೋಮುಖ ಪರಿಸರವನ್ನು ಕಟ್ಟಿಕೊಡುತ್ತದೆ. ಐದು ಲೇಖಕರ ಆರು ಲೇಖನಗಳಿವೆ. ವ್ರತ-ಹಬ್ಬಗಳು ಮತ್ತು ಪೂಜೆಯ ಮುಖ್ಯಭಾಗಗಳಲ್ಲೊಂದಾದ ಮಂತ್ರ-ಪುಷ್ಪದ ಪರಿಚಯವು ಈ ಕೃತಿಗೆ ಅಗತ್ಯವಾದ ಹಿನ್ನೆಲೆಯನ್ನು ಒದಗಿಸಿದೆ. ಗೌರೀಗಣಪತಿ ಹಬ್ಬದ ಬಗೆಗಿನ ಲೇಖನವು, ಶಿವಮೊಗ್ಗ ಜಿಲ್ಲೆಯ ಹಬ್ಬಗಳ ಪ್ರಾತಿನಿಧಿಕ ಪರಿಚಯವಾಗಿ ಬಂದಿದೆ. `ನೆನಪು ಸಿಹಿ' ಸಂಕೇತಿಗಳ ಒಂದು ಹಳ್ಳಿಯ ಆಚರಣೆ ಮತ್ತು ಪರಿಸರದ ಆಮೂಲಾಗ್ರ ಪರಿಚಯ ಮಾಡಿಕೊಡುತ್ತದೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books