ಸರಳ ಶೂನ್ಯ ಸಂಪಾದನೆ

Author : ಎಲ್. ಬಸವರಾಜು

Pages 351

₹ 225.00




Year of Publication: 2016
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ವಿದ್ವಾಂಸ ಡಾ. ಎಲ್. ಬಸವರಾಜು ಅವರು ಸಂಪಾದಿಸಿದ ಕೃತಿ-ಸರಳ ಶೂನ್ಯ ಸಂಪಾದನೆ. ವೀರಶೈವ ಸಿದ್ಧಾಂತ ಇಲ್ಲವೇ ಸಾಹಿತ್ಯದಲ್ಲಿ ಶೂನ್ಯ ಸಂಪಾದನೆಯು ಮಹತ್ವದ ಕೃತಿ. ಗ್ರಂಥವು ಎಡೆಯೂರ ಸಿದ್ದಲಿಂಗೇಶ್ವರರ ಒಂದು ರಚನೆ. ಈ ಗ್ರಂಥವು 12 ನೇ ಶತಮಾನದ ಬಸವಾದಿ ಶರಣರು ಕಲ್ಯಾಣ ನಗರದಲ್ಲಿ ಅನುಭವ ಮಂಟಪದಲ್ಲಿ ಮಾಡಿದ ಅನುಭಾವ ಗೋಷ್ಟಿಯ ಆಗರ. ಬಸವಾದಿ ಶರಣರು ಶೂನ್ಯ ಸಂಪಾದನೆ ಪ್ರತಿಪಾದಿಸಿದರು. ಗಣಿತದ ಸೊನ್ನೆಯಲ್ಲ. ಶೂನ್ಯ ಸಂಪಾದನೆ ಎಂದರೆ ಮೋಕ್ಷ ಸಾಧಿಸುವುದು. ಶರಣರ ಕಾಯಕ ತತ್ವಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳುವುದಾಗಿದೆ. ಇಂತಹ ಮಹತ್ವದ ವಿಚಾರಗಳ ಮೊತ್ತವಾಗಿ ಶೂನ್ಯ ಸಂಪಾದನೆ ಇದ್ದು, ಲೇಖಕ ಡಾ. ಎಲ್. ಬಸವರಾಜು ಅವರು ಸಂಪಾದಿಸಿದ್ದಾರೆ.

About the Author

ಎಲ್. ಬಸವರಾಜು
(07 October 1919 - 29 January 2012)

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...

READ MORE

Related Books