ಸರಸ್ವತಿ

Author : ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ

Pages 120

₹ 15.00




Year of Publication: 1978
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ವಿದ್ಯಾಧಿದೇವತೆ ಸರಸ್ವತಿಯನ್ನು ಚಿತ್ರಿಸಿರುವ ಕೃತಿ.  ಲೇಖಕ ಲಕ್ಷ್ಮೀನರಸಿಂಹಶಾಸ್ತ್ರೀ ಅವರು ರಚಿಸಿದ್ದಾರೆ.ಸರಸ್ವತಿ ವಿದ್ಯೆಗೆ ಅಧಿದೇವತೆ. ಮನುಷ್ಯನಿಗೆ ಮಾತು ಬಂದದ್ದು ಅವಳ ಅನುಗ್ರಹದಿಂದ. ಮನುಷ್ಯರ ಕಲ್ಯಾಣಕ್ಕಾಗಿ ಮತ್ತೆ ಮತ್ತೆ ಅವರ ನೆರವಿಗೆ ಬಂದವಳು. ಅವಳ ಅನುಗ್ರಹದಿಂದ ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ರಚಿಸಿದ. ಮನುಷ್ಯರಿಗಾಗಿಯೇ ನದಿಯಾಗಿ ಹರಿದಳು ಎಂದು ಸರಸ್ವತಿ ದೇವಿಯನ್ನು ವರ್ಣಿಸಲಾಗಿದೆ.

About the Author

ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ
(12 May 1929)

ಲ.ನ.ಶಾಸ್ತ್ರಿ ಎಂತಲೇ ಪರಿಚಿತರಾಗಿರುವ ಕವಿ, ಕಾದಂಬರಿಕಾರ, ಧಾರ್ಮಿಕ ಸಾಹಿತ್ಯ ರಚನಕಾರರಾದ ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ ಅವರು ಜನಿಸಿದ್ದು 1929 ಮೇ 12ರಂದು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿಮ ಹುರುಗಲವಾಡಿ ಇವರ ಹುಟ್ಟೂರು. ಮಂಡ್ಯದಲ್ಲಿಯೇ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದ ಇವರು ಅಂಚೆ ಇಲಾಖೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು.  ಇವರ ಪ್ರಮುಖ ಕೃತಿಗಳೆಂದರೆ ಪೂರ್ವರಾಗ (ಕವಿತಾಸಂಕಲನ), ರಸಾಗೌತಮಿ, ಊರ್ವಶಿ (ಕಥನಕವನಗಳು), ಮಾರೀಚ (ನಾಟಕ), ಧರೆಗಿಳಿದ ದಿವ್ಯತೇಜ (ಕಾದಂಬರಿ), ಶ್ರೀ ಜಗದ್ಗುರು (ಸಂಪಾದನೆ), ಸಂಭಾಷಣ ತರಂಗಿಣಿ, ಶ್ರೀ ಸಚ್ಚಿದಾನಂದ ಭಾರತಿ (ಜೀವನಚರಿತ್ರೆಗಳು), ಅಳಸಿಂಗ ಪೆರುಮಾಳ್ ಇತ್ಯಾದಿ. ...

READ MORE

Related Books