ಸಾರ್ಥಕ ಬದುಕಿನ ಸೂತ್ರಾವಳಿ

Author : ಎಸ್‌.ಆರ್‌. ರಾಮಸ್ವಾಮಿ

₹ 70.00




Published by: ರಾಷ್ಟ್ರೋತ್ತಾನ ಸಾಹಿತ್ಯ
Address: ಬೆಂಗಳೂರು-19.

Synopsys

ಸಾರ್ಥಕ ಬದುಕಿನ ಸೂತ್ರಾವಳಿ ಮೌಲಿಕ ಬರಹಗಳ ಕೃತಿಯನ್ನು ಎಸ್.ಆರ್.‌ ರಾಮಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಮೂಲ ಇಂಗ್ಲಿಷ್‌ ಆಗಿದ್ದು ಇದನ್ನು ಕೆ ಎಸ್ ಚಂದ್ರಶೇಖರ ಅಯ್ಯರ್ ಅವರು ರಚಿಸಿದ್ದಾರೆ. ಕೆ ಎಸ್ ಚಂದ್ರಶೇಖರ ಅಯ್ಯರ್ ಅವರು ಸ್ವಭಾವತಃ ಚಿಂತನಶೀಲರು. ಜೀವನದುದ್ದಕ್ಕೂ ತಮಗೆ ಸಾರ್ಥಕವೆನಿಸಿದ ಕೆಲಸಗಳನ್ನು ಅತ್ಯಂತ ಸುವ್ಯವಸ್ಥವಾಗಿ ಮಾಡಿದವರು. ಸಾರ್ಥಕ ಜೀವನಪಥವನ್ನು ಕುರಿತು ಅವರು ಬರೆದ ಪ್ರಬಂಧ ’The Enrichment of Life’ ದ ಅನುವಾದ ’ಸಾರ್ಥಕ ಬದುಕಿನ ಸೂತ್ರಾವಳಿ’.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books