ಸರ್ವಾಂಗ ಸುಂದರ ವ್ಯಾಯಾಮ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 74

₹ 175.00




Year of Publication: 2000
Published by: ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531, ಹೊಳಲ್ಕೆರೆ ತಾಲ್ಲೂಕು

Synopsys

‘ಸರ್ವಾಂಗ ಸುಂದರ ವ್ಯಾಯಾಮ’ ತಿ.ರು.ಕ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿರುವ ಯೋಗಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ ಅವರ ಕೃತಿ. ಕೃತಿಯ ಕುರಿತು ಬರೆಯುತ್ತಾ ‘ಆಶ್ರಮದಲ್ಲಿ ಇಪ್ಪತ್ತೆಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯೋಗಶಿಕ್ಷಣ ಶಿಬಿರದ ಪಠ್ಯಕ್ರಮದಲ್ಲಿ ಸರ್ವಾಂಗಸುಂದರ ವ್ಯಾಯಾಮ ಪದ್ದತಿಯೂ ಒಂದು. ಈ ಯೋಗಶಿಕ್ಷಣ ಶಿಬಿರವು ಪ್ರತಿವರ್ಷವಬ ಅಕ್ಟೋಬರ್ ನಾಲ್ಕನೆಯ ತಾರೀಖಿನಿಂದ ಅಕ್ಟೋಬರ್ ಇಪ್ಪತ್ತೈದನೆಯ ತಾರೀಖು ಪೂರ್ತಿ ನಡೆಯುತ್ತದೆ. ಆಗ ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಾಯಾಮ, ಧ್ಯಾನ, ಸರ್ವಾಂಗಸುಂದರ ವ್ಯಾಯಾಮ ಮತ್ತು ಅಂಗಮರ್ದನ ಸಂಬಂಧವಾಗಿ ಶಿಕ್ಷಣವನ್ನು ನೀಡಲಾಗುತ್ತದೆ. ಇವುಗಳಲ್ಲಿ ಉಳಿದೆಲ್ಲ ವಿಷಯಕ್ಕೆ ಸಂಬಂಧಪಟ್ಟಂಥ ಗ್ರಂಥಗಳು ಈಗಾಗಲೇ ಆಶ್ರಮದಿಂದ ಪ್ರಕಟಿಸಲ್ಪಟ್ಟಿವೆಯಾದರೂ ಸರ್ವಾಂಗಸುಂದರ ವ್ಯಾಯಾಮದ ವಿಷಯವಾಗಿ ಗ್ರಂಥವನ್ನು ಬರೆಯಲಾಗಲಿಲ್ಲ. ಪ್ರತಿವರ್ಷವೂ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಪ್ರಾತ್ಯಕ್ಷಿಕವಾದ ಶಿಕ್ಷಣವನ್ನು ನೀಡಿ ಇದರ ಸಂಬಂಧವಾದ ಟಿಪ್ಪಣಿಯನ್ನಷ್ಟೇ ಬರೆಯಿಸುತ್ತಿದ್ದೆವು. ತರಗತಿಯೂ ಸುಸೂತ್ರವಾಗಿ ನಡೆಯುತ್ತಿತ್ತು. ಆದರೂ ಪ್ರಾರಂಭದಿಂದಲೂ ವಿದ್ಯಾರ್ಥಿಗಳು ಸ್ವಾಮೀಜಿ-ಯೋಗದ ಎಲ್ಲ ವಿಷಯಕ್ಕೆ ಸಂಬಂಧಪಟ್ಟಂತೆ ನೀವು ಗ್ರಂಥಗಳನ್ನು ಬರೆದಿದ್ದೀರಿ, ಆದರೆ ಸರ್ವಾಂಗಸುಂದರ ವ್ಯಾಯಾಮದ ವಿಷಯವಾಗಿ ಮಾತ್ರ ಗ್ರಂಥ ರಚನೆ ಆಗಿಲ್ಲ. ಆದುದ್ದರಿಂದ ದಯವಿಟ್ಟು ಅದನ್ನೂ ಬರೆಯಿರಿ ಎಂದು ಒತ್ತಾಯಿಸುತ್ತಲೇ ಇದ್ದರು. ಈ ಒತ್ತಾಯ, ಬೇಡಿಕೆ, ಕೇಳಿಕೆ ಎಷ್ಟು ವರ್ಷ? ಯೋಗಶಿಕ್ಷಣ ತರಗತಿ ಪ್ರಾರಂಭವಾದ ಈ ಇಪ್ಪತ್ತೆಂಟು ವರ್ಷಗಳಿಂದಷ್ಟೇ ಅಲ್ಲ- ನಾನು ಉತ್ತರ ಹಿಂದುಸ್ಥಾನದಿಂದ ಕರ್ನಾಟಕಕ್ಕೆ ಕಾಲಿಟ್ಟು ಯೋಗ ಮತ್ತು ವ್ಯಾಯಾಮ ಪ್ರಾರಂಭಿಸಿದ 1935ನೆಯ ಇಸವಿಯ ಪ್ರಾರಂಭದಿಂದ ಅಂದರೆ ಸಮೀಪ ಐದು ದಶಕಗಳ ನಂತರ ಈ ಕೃತಿ ರಚಿಸಿದ್ದೇನೆ ಎಂದಿದ್ದಾರೆ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ. ಕೃತಿಯಲ್ಲಿ ಭೂಮಿಕೆ, ವ್ಯಾಯಾಮ ಸಾಧಕರಿಗೆ ಕೆಲವು ಸಲಹೆಗಳು, ಸರ್ವಾಂಗ ಸುಂದರ ವ್ಯಾಯಾಮ ವಿಧಿ, ಹಾಥ್ ಕೀ ಕಸರತ್, ಪಾಂವ್ ಕೀ ಕಸರತ್, ಬೈಠಕ್ ಎಂಬ ಹೆಸರಿನಲ್ಲಿ ಯೋಗದ ಕುರಿತ ಮಾಹಿತಿಗಳನ್ನು ವಿಶ್ಲೇಷಿಸಿದ್ದಾರೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books