ಸತಿಯೇ ಸಾಕಿಯಾದ ಕವಿಸಮಯ

Author : ಕಾಶೀನಾಥ ಅಂಬಲಗೆ

Pages 136

₹ 130.00




Year of Publication: 2019
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105

Synopsys

ಕವಿ, ಲೇಖಕ ಕಾಶೀನಾಥ ಅಂಬಲಗಿ ಅವರ ಗಜಲ್ ಸಂಕಲನ ‘ಸತಿಯೇ ಸಾಕಿಯಾದ ಕವಿಸಮಯ’. ಗಜಲ್‌ಗಳನ್ನು ಕೇಳಿಸಿಕೊಳ್ಳುವ ಈ ಹೊತ್ತಿನಲ್ಲಿ ಕಾಫಿಯಾ, ರದೀಫ್, ಮತ್ತಾ, ಹುಸ್ತೆ ಮತ್ತಾ .. ಇತ್ಯಾದಿ ಪರಿಭಾಷೆಗಳ ಗೊಡವೆಗೆ ಹೋಗುವುದು ಬೇಡವೆನ್ನಿಸುತ್ತದೆ.

ಯಾವುದನ್ನಾದರೂ, ಅದು ಸಾಕಿಯೋ, ಮಧುಶಾಲೆಯೋ, ಮದ್ಯವೋ, ಪ್ರೇಮವೋ, ಅನುಭಾವವೋ ಒಟ್ಟಿನಲ್ಲಿ ಲೌಕಿಕದ ಯಾವ ಉನ್ಮತ್ತತೆಯಾದರೂ ಸರಿಯೇ, ತೀವ್ರವಾಗಿ ಹಚ್ಚಿಕೊಂಡಾಕ್ಷಣ ಅದನ್ನು ವಿಸರ್ಜಿಸುವ ಒತ್ತಾಸೆಯೊಂದು ಮೊಳೆಯಬೇಕು. ಆಗ ಮಾತ್ರ ಅದು ನಿಜವಾಗಿ ಹಚ್ಚಿಕೊಂಡುದರ ಕುರುಹು. ಆಹ್ವಾನಿಸುವುದರ ಸುಖ ನಿಜವಾಗಿ ಅರಿವಿಗೆ ಬರುವುದು ಅದನ್ನು ಬಿಟ್ಟುಬಿಡುವುದರಲ್ಲಿ. ಹಾಗಾಗಿ, ಇದೊಂದು ಆಹ್ವಾನ-ವಿಸರ್ಜನೆಯ ಯಾನ ಎನ್ನಬಹುದು. ಲೌಕಿಕದ ಉತ್ತುಂಗವಾದ ಪಾರಲೌಕಿಕತೆಯ ಸ್ಪರ್ಶವೊಂದು ದೊರಕದೆ ಹೋದರೆ ಅದು ಗಜಲ್‌ ಆಗುವುದಾದರೂ ಹೇಗೆ? ಅಂತಹ ಪಾರಲೌಕಿಕ ಸ್ಪರ್ಶ ಇಲ್ಲಿಯ ಗಜಲ್ ಗಳಿಗೆ ಇದೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books