ಸವಾಲನ್ನು ಎದುರಿಸುವ ಛಲ

Author : ಜಿ.ಟಿ. ನಾರಾಯಣರಾವ್

Pages 208

₹ 150.00




Year of Publication: 2014
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ವಿಜ್ಞಾನ ಸಾಹಿತ್ಯದ ಮೂಲಕ ಜನಪ್ರಿಯರಾದ ಜಿ.ಟಿ. ನಾರಾಯಣರಾವ್‌. 'ಸವಾಲನ್ನು ಎದುರಿಸುವ ಛಲ’ ಒಂದು ರೀತಿಯಲ್ಲಿ ಅವರ ಚಿಂತನರೂಪದ ಬರಹ. ನಾವು ಬಲ್ಲ ವಿಷಯಗಳನ್ನೇ ಮರುಪ್ರಶ್ನಿಸಿಕೊಂಡರೆ ಅಪರಿಚಿತವೆನಿಸಿ ಕಾಡುತ್ತವೆ. ಅಂತಹ ವಿಷಯಗಳನ್ನು ಆಯ್ದು ಅವುಗಳನ್ನು ನಿರ್ವಚಿಸಲು ಹೊರಡುತ್ತಾರೆ ಲೇಖಕರು. ಉದಾಹರಣೆಗೆ ಶಿಸ್ತು, ವಿನಯ, ಶೀಲ ಇತ್ಯಾದಿ ವಿಚಾರಗಳು ಎಲ್ಲರಿಗೂ ಗೊತ್ತಿರುವ ಸಂಗತಿಗಳು. ಆದರೆ ಅದನ್ನೇ ಮರುಪ್ರಶ್ನಿಸಿಕೊಂಡು ಚಿಂತನೆಗೆ ತೊಡಗಿದರೆ ಅನೇಕ ವಿಚಾರಗಳು ಹೊಳೆಯುತ್ತವೆ. ಅಂತಹ ವಿಚಾರಗಳನ್ನೇ ಕೃತಿ ಪ್ರಧಾನವಾಗಿ ಕೇಂದ್ರೀಕರಿಸಿದೆ. 

ಜಿ.ಟಿ.ನಾ ಅವರ ಸಮಕಾಲೀನರೇ ಆಗಿದ್ದ ಮತ್ತೊಬ್ಬ ವಿಜ್ಞಾನ ಬರಹಗಾರ ಅಡ್ಯನಡ್ಕ ಕೃಷ್ಣಭಟ್ ಅವರ ಮುನ್ನುಡಿ ಪುಸ್ತಕಕ್ಕೆ ಇದೆ. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books