ಸವಾರಿಗಳು

Author : ಶೈಲಜಾ ಹಾಸನ



Published by: ಮಾಣಿಕ್ಯ ಪ್ರಕಾಶನ
Address: ಹಾಸನ

Synopsys

ಸುಲಲಿತವಾಗಿ ಓದುಗರ ಭಾವಭಿತ್ತಿಯನ್ನು ಪ್ರವೇಶಿಸುತ್ತಿರುವ ‘ಸವಾರಿಗಳು’ ಕೃತಿ ಶೈಲಜಾ ಹಾಸನರವರ ಇತ್ತೀಚೆಗೆ ಓದುಗವಲಯವನ್ನು ಸೇರಿಕೊಂಡಿದೆ. ಹದಿನೈದು ವಿಭಿನ್ನ ವಸ್ತುಗಳನ್ನು ಸಂಚಯಿಸಿಕೊಂಡಿರುವ ಪ್ರಸ್ತುತ ಕೃತಿ ಕ್ಲಿಷ್ಟತೆ-ಕ್ಲುಪ್ತವಾಗಿರದೆ ಓದುಗರನ್ನು ತಮ್ಮದೇ ಅನುಭವಗಳನ್ನು ಅನುಸಂಧಾನಿಸಲು ಪ್ರೇರಕವಾಗಿದೆ. ‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಮೊದಲ ಪ್ರಬಂಧದ ಶೀರ್ಷಿಕೆ. ಓದುಗರನ್ನು ಸೂಜಿಗಲ್ಲಿನಂತೆ ಸೆಳೆ ಯುವ ಇಲ್ಲಿನ ಪದವಿನ್ಯಾಸ ಮತ್ತು ವಸ್ತುಗಳು ಸವಾರಿಗಳು ಕೃತಿಯ ಮೂಲದ್ರವ್ಯ ಎನ್ನಬಹುದು.

About the Author

ಶೈಲಜಾ ಹಾಸನ
(15 May 1964)

ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ  ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...

READ MORE

Related Books