ಸುಲಲಿತವಾಗಿ ಓದುಗರ ಭಾವಭಿತ್ತಿಯನ್ನು ಪ್ರವೇಶಿಸುತ್ತಿರುವ ‘ಸವಾರಿಗಳು’ ಕೃತಿ ಶೈಲಜಾ ಹಾಸನರವರ ಇತ್ತೀಚೆಗೆ ಓದುಗವಲಯವನ್ನು ಸೇರಿಕೊಂಡಿದೆ. ಹದಿನೈದು ವಿಭಿನ್ನ ವಸ್ತುಗಳನ್ನು ಸಂಚಯಿಸಿಕೊಂಡಿರುವ ಪ್ರಸ್ತುತ ಕೃತಿ ಕ್ಲಿಷ್ಟತೆ-ಕ್ಲುಪ್ತವಾಗಿರದೆ ಓದುಗರನ್ನು ತಮ್ಮದೇ ಅನುಭವಗಳನ್ನು ಅನುಸಂಧಾನಿಸಲು ಪ್ರೇರಕವಾಗಿದೆ. ‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಮೊದಲ ಪ್ರಬಂಧದ ಶೀರ್ಷಿಕೆ. ಓದುಗರನ್ನು ಸೂಜಿಗಲ್ಲಿನಂತೆ ಸೆಳೆ
ಯುವ ಇಲ್ಲಿನ ಪದವಿನ್ಯಾಸ ಮತ್ತು ವಸ್ತುಗಳು ಸವಾರಿಗಳು ಕೃತಿಯ ಮೂಲದ್ರವ್ಯ ಎನ್ನಬಹುದು.©2024 Book Brahma Private Limited.