ಸಾವರ್ಕರ್, ಗೋಡ್ಸೆ ನಂಟು ಮತ್ತು ಹಿಂದುತ್ವ ಸಿದ್ದಾಂತ

Author : ಸುರೇಶ ಭಟ್ ಬಾಕ್ರಬೈಲ್‌

Pages 232

₹ 120.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಎ.ಜಿ. ನೂರಾನಿ ಅವರ 'ಸಾವರ್ಕರ್, ಗೋಡ್ಸೆ ನಂಟು ಮತ್ತು ಹಿಂದುತ್ವ ಸಿದ್ದಾಂತ' ಕೃತಿ ಪ್ರಸ್ತುತ ಸಮಾಜ ಗಾಂಧಿ ಹಂತಕ ಗೋಡ್ಸೆ ಮತ್ತು ಆತನ ಗುರು ಎನಿಸಿಕೊಂಡ ವಿ.ಡಿ. ಸಾವರ್ಕರ್  ಜೊತೆಗಿನ ಸಂಬಂಧವನ್ನು ಎತ್ತಿ ತೋರಿಸಲು ಯತ್ನಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ರಾಜಕಾರಣಿಗಳು, ಪಟ್ಟಭದ್ರ ಹಿತಾಸಕ್ತಿಗಳು ಆ ಇಬ್ಬರನ್ನೂ ಅಮಾಯಕರಂತೆ ಬಿಂಬಿಸುತ್ತಿರುವುದನ್ನು ನೂರಾನಿ ತಮ್ಮ ಬರವಣಿಗೆಯ ಮೂಲಕ ಪ್ರಶ್ನಿಸಿದ್ದಾರೆ. ಹಾಗೆ ಅವರನ್ನು ಮುಗ್ಧರು ಎಂಬಂತೆ ಬಿಂಬಿಸುವುದರಿಂದ ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಆಗುವ ಲಾಭವನ್ನು ಒರೆಗೆ ಹಚ್ಚಿದ್ದಾರೆ. 

ಕೃತಿ ಆರು ಅಧ್ಯಾಯಗಳನ್ನು ಒಳಗೊಂಡಿದೆ. ಚಿಂತಕ ಸುರೇಶ್‌ಭಟ್‌ ಬಾಕ್ರಬೈಲು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಸಾವರ್ಕರ್ ರಾಷ್ಟ್ರೀಯವಾದದ ಗುರಿಯೇನು, ಅಂಡಮಾನ್ ದ್ವೀಪ ಸಮೂಹ ಮತ್ತು ಹಿಂದುತ್ವದ ಉಗಮ, ಹಿಂದುತ್ವಕ್ಕೆ ಎದುರಾಗಿ ಹಿಂದೂ ಧರ್ಮ, ಗಾಂಧಿ ಹತ್ಯೆ ಮತ್ತು ಅದರ ಪರಿಣಾಮಗಳು ಇತ್ಯಾದಿ ಅಧ್ಯಾಯಗಳು ಪ್ರಸ್ತುತ ರಾಜಕಾರಣವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುತ್ತವೆ. 

About the Author

ಸುರೇಶ ಭಟ್ ಬಾಕ್ರಬೈಲ್‌

ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ...

READ MORE

Related Books