ಸವಿಕಣ್ಣಿ

Author : ರಮೇಶ ಎಸ್.ಕತ್ತಿ

Pages 232

₹ 200.00




Year of Publication: 2020
Published by: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು
Address: ಆಲಮೇಲ ವಿಜಯಪುರ ಜಿಲ್ಲೆ
Phone: 7795341335

Synopsys

‘ಸವಿಕಣ್ಣಿ’ ಲೇಖಕ ರಮೇಶ ಎಸ್. ಕತ್ತಿ ಅವರ ಸಂಪಾದಿತ ಸ್ಮರಣ ಸಂಚಿಕೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಕಟಿಸಲಾದ ಈ ಕೃತಿಯಲ್ಲಿ ‘ಕಡಣಿ’ ಪುಟ್ಟ ಗ್ರಾಮದಲ್ಲಿ ಕನ್ನಡಾಂಬೆಯ ಜಾತ್ರೆಯು ಅದ್ದೂರಿಯಾಗಿ ಜರಗುತ್ತಿರುವ ಹಾಗೂ ಗ್ರಾಮಸ್ಥರ ಸಹಕಾರದ ಚಿತ್ರಣವಿದೆ. 

ಸಮ್ಮೇಳನಾಧ್ಯಕ್ಷರ ಭಾಷಣ, ಉದ್ಘಾಟಕರ ಭಾಷಣ, ಆಶಯ ಮಾತು, ಆಲಮೇಲ ತಾಲೂಕಿನ ಸ್ಥಳನಾಮಗಳು ಒಂದು ವಿಶ್ಲೇಷಣೆ, ಆಲಮೇಲ ಗ್ರಾಮದಲ್ಲಿರುವ ವೀರಗಲ್ಲುಗಳು, ಬಿರುನೆಲದ ಸಜ್ಜನ ಬರಹಗಾರ, ಮಹಿಳಾ ಸಾಹಿತ್ಯ: ದಲಿತ ಸಂವೇದನೆ, ಅಲಮೇಲ ತಾಲೂಕಿನ ಸ್ವಾತಂತ್ಯ್ರ ಹೋರಾಟಗಾರರು, ಕಡಣಿಯ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ, ಆಲಮೇಲ ತಾಲೂಕಿನ ಲಲಿತಕಲೆ ಮತ್ತು ಕಲಾವಿದರು, ಜಗದೇವ-ಮಲ್ಲಿಬೊಮ್ಮರ ಜೀವನಗಾಥೆ, ಆಳಮೇಲ ತಾಲೂಕಿನ ಮಾಧ್ಯಮ ಕ್ಷೇತ್ರ, ಮಹಿಳೆ ಮತ್ತು ಅವಕಾಶ, ಆಲಮೇಲ ಪರಿಸರದ ಮಕ್ಕಳ ಸಾಹಿತಿಗಳು, ಕಣ್ಣಿಯ ಭೋಗಣ್ಣ ವೃತ್ತಾಂಶಗಳು ಹೀಗೆ ಒಟ್ಟು 20 ಶೀರ್ಷಿಕೆಗಳನ್ನು ಒಳಗೊಂಡಿದೆ. 

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books