ಸಾವು

Author : ಡಿ.ಎಸ್. ಲಿಂಗರಾಜು

Pages 148

₹ 100.00




Year of Publication: 2017
Published by: ಸಿವಿಜಿ ಪಬ್ಲಿಕೇಷನ್ಸ್‌
Address: ನಂ.277, 5ನೇ ಅಡ್ಡರಸ್ತೆ, ವಿಧಾನಸೌಧ ಲೇಔಟ್‌, ಲಗ್ಗೆರೆ, ಬೆಂಗಳೂರು

Synopsys

ಡಿ.ಎಸ್. ಲಿಂಗರಾಜು ಅವರ ವಿಭಿನ್ನ ಕೃತಿ ’ಸಾವು- ಒಂದು ಹುಡುಕಾಟ’. ಬದುಕಿನ ಅಂತ್ಯದ ನಂತರ ಸಾವು ಎಂಬುದು ಎಲ್ಲರಿಗೂ ಖಚಿತವಾಗಿ ಗೊತ್ತಿದ್ದರೂ, ಸಾವಿನ ನಂತರ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಸಮುದಾಯಗಳಲ್ಲಿ, ಅನೇಕ ನಾಗರೀಕತೆಗಳಲ್ಲಿ ಸಾವಿನ ನಂತರದ ಆಚರಣೆಗಳು, ನಂಬಿಕೆಗಳು ಭಿನ್ನವಾಗಿವೆ. ಈ ಕೃತಿಯಲ್ಲಿ ಸಾವನ್ನು ಕುರಿತ ವೈಜ್ಞಾನಿಕ ವಿವರಣೆಯೊಂದಿಗೆ ಪ್ರಾರಂಭವಾಗುವ ಸಾವನ್ನು ಕುರಿತ ಕಥನವನ್ನು ಧರ್ಮಗ್ರಂಥ, ಪುರಾಣಗಳಲ್ಲಿ ಹೇಗೆ ವಿಶ್ಲೇಷಿಸಲಾಗಿದೆ ಎಂಬುದರ ವಿಸ್ತೃತ ಚರ್ಚೆಯನ್ನು ಈ ಕೃತಿ ಮಾಡುತ್ತದೆ. ಸಾವಿನ ಕುರಿತಾಗಿ ಎಳೆಎಳೆಯಾಗಿ ವಿವರಿಸುವ ಲೇಖಕರು ಹಲವಾರು ಅಧ್ಯಾಯಗಳ ಮೂಲಕ ವೈಜ್ಞಾನಿಕ ವಿಶ್ಲೇಷಣೆಯನ್ನು ಕಟ್ಟಿಕೊಟ್ಟಿದ್ದಾರೆ.

ಮರಣವೆಂಬ ಮಹಾಪ್ರಸ್ಥಾನ, ಮಾನವನ ಪ್ರಭಾವಲಯ, ಸಾವಿನ ವಿಧಾನಗಳು, ಸಾವು ಎಂದರೇನು?, ಸಾವು ಮತ್ತು ಹುಟ್ಟುಗಳ ನಡುವೆ, ಸಾವಿಗೆ ಪ್ರಮುಖ ಕಾರಣಗಳು, ಮರಣ ಯೋಗ, ಸಾವಿನ ಮುನ್ಸೂಚನೆಗಳು, ಸಾವಿನ ಸಮಯ ಪೂರ್ವ ನಿರ್ಧರಿತವೇ?, ಸತ್ತ ನಂತರ ಏನಿದೆ?, ಜನ್ಮಾಂತರಗಳ ಅವಧಿ, ಕರ್ಮಸಿದ್ಧಾಂತ, ಸಂಚಿತ ಬದಲಾವಣೆಗಳ ತತ್ವ, ಜೀನಾ ಮರ್‌ನಾ ಯಹಾ!, ಗುಡಿಯ ನೋಡಿರಣಾ, ಆತ್ಮದ ತೂಕವೆಷ್ಟು?, ಸಾವಿನ ಅನುಭವಗಳು, ಪುನರ್ಜನ್ಮದ ಕಾರಣಗಳು, ಪ್ರಜ್ಞೆಯ ಸ್ಥಾನಾಂತರ ಹೀಗೆ ಹಲವು ಹಂತಗಳಲ್ಲಿ ಸಾವಿನ ಕುರಿತಾಗಿ ಲೇಖಕರು ವಿವರಿಸುತ್ತಾ ಹೋಗಿದ್ದಾರೆ.

About the Author

ಡಿ.ಎಸ್. ಲಿಂಗರಾಜು

ಲೇಖಕ ಡಿ.ಎಸ್. ಲಿಂಗರಾಜು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು, ಮಾಯಸಂದ್ರದವರು. ತಂದೆ- ಡಿ.ಎಸ್. ಶಿವರಾಜೇಗೌಡ, ತಾಯಿ- ಬಿ.ಕೆ ಜಯಮ್ಮ. ಮಾಯಸಂದ್ರ, ತುರುವೇಕೆರೆ, ಕೋಲಾರ ಮತ್ತು ಚುಂಚನಗಿರಿಯಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಪದವಿ (1985), ಕೆಲಕಾಲ ಕುಣಿಗಲ್ ತಾಲೂಕು ಎಡೆಯೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ. ನಂತರ ಕೆಎಎಸ್ ಗೆಜೆಟೆಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿ 1991 ರಿಂದ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ, ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಕಾಲಿಸುತ್ತಿದ್ದಾರೆ. ತುಷಾರ ಮಾಸ ಪತ್ರಿಕೆಯ ದೇಶ-ವಿದೇಶಗಳ ಪರಿಚಯ ಮಾಲೆಯಲ್ಲಿ ಸುಮಾರು ...

READ MORE

Related Books