ಸವ್ಯಸಾಚಿ ಸಾಹಿತಿ

Author : ಅನಿತಾ ಪಿ. ತಾಕೊಡೆ

Pages 236

₹ 190.00




Year of Publication: 2018
Published by: ಸಾಹಿತ್ಯ ಸುಧೆ ಪ್ರಕಾಶನ
Address: ಎಂಐಜಿ 45, ಹುಡ್ಕೋ 2ನೇ ಹಂತ, ವಿವೇಕಾನಂದ ಸರ್ಕಲ್‌ ಹತ್ತಿರ, ಮೈಸೂರು
Phone: 8867098798

Synopsys

ಡಾ. ಬಿ ಜನಾರ್ದನ ಭಟ್‌ ಅವರು ಕಾದಂಬರಿಕಾರ, ಕಥೆಗಾರ, ಅಂಕಣಕಾರರಾಗಿ ಪರಿಚಿತರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಪ್ರಾದೇಶಿಕ ವಸ್ತು, ಪಾತ್ರಗಳಿಗೆ ಒತ್ತುಕೊಟ್ಟು ಕಥೆ, ಕಾದಂಬರಿಗಳನ್ನು ಬರೆಯುತ್ತಾ ಬಂದಿದ್ದಾರೆ. ಇವರ ಕುರಿತು ಅನಿತಾ ಪಿ. ತಾಕೊಡೆ ಅವರು ’ಸವ್ಯಸಾಚಿ ಸಾಹಿತಿ’ ಕೃತಿಯನ್ನು ರಚಿಸಿದ್ದಾರೆ. ಜನಾರ್ಧನ್‌ ಅವರ ಬದುಕು, ಬರೆಹಗಳು, ಕಾದಂಬರಿಗಳು, ಕಥಾವಸ್ತುಗಳ ಕುರಿತು ವಿವರಿಸಿದ ಈ ಕೃತಿಯು ಭಟ್‌ ಅವರ ಸೃಜನಾತ್ಮಕ ಪ್ರತಿಭೆಯ ಸಮಗ್ರ ದರ್ಶನ ನೀಡುತ್ತದೆ. 

 

About the Author

ಅನಿತಾ ಪಿ. ತಾಕೊಡೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್‌ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ...

READ MORE

Related Books