ಶಾರದಾಪೀಠದ ಮಾಣಿಕ್ಯ

Author : ಸಾ. ಕೃ. ರಾಮಚಂದ್ರರಾವ್

Pages 240

₹ 248.00




Year of Publication: 2021
Published by: ಅಭಿಜ್ಞಾನ ಪ್ರಕಾಶನ
Address: ಬೆಂಗಳೂರು

Synopsys

ಖ್ಯಾತ ಸಾಹಿತಿ ಸಾ,ಕೃ. ರಾಮಚಂದ್ರರಾವ್ ಅವರ ಕೃತಿ-ಶಾರದಾಪೀಠದ ಮಾಣಿಕ್ಯ. ಶೃಂಗೇರಿಯ ಶಾರದಾಪೀಠದ ಶ್ರೀ ಚಂದ್ರಶೇಖರ ಭಾರತೀಮಹಾಸ್ವಾಮಿಗಳು (1892-1954) ಅನೇಕರ ಬಾಳಿಗೆ ಬೆಳಕಾದ ಮಹಾಗುರು. ಇವರ ಜೀವನಚರಿತ್ರೆ ಈ ಕೃತಿ. ಸಂತರೊಬ್ಬರ ಬದುಕು, ಬವಣೆ, ಬೆಳವಣಿಗೆ, ಸಿದ್ಧಿ-ಸಾಧನೆ, ಪ್ರಭಾವ--ಇವುಗಳ ಸಮಗ್ರಚಿತ್ರ ನೀಡುವುದು ಈ ಕೃತಿಯ ಉದ್ದೇಶ. ಶ್ರೀ ಚಂದ್ರಶೇಖರಭಾರತೀಮಹಾಸ್ವಾಮಿಗಳಲ್ಲಿ ಈ ಲೇಖಕರು ಗುರುವನ್ನು ಕಂಡು ಧನ್ಯತೆಯನ್ನು ಪಡೆದಿದ್ದವರು. ಇಲ್ಲಿಯ ಬರವಣಿಗೆಯಲ್ಲೊಂದು ವಿಶೇಷ ಹೊಳಪಿದೆ. ಅವಧೂತ ಸಂಪ್ರದಾಯ ಮತ್ತು ಶ್ರೀ ಸದಾಶಿವ ಬ್ರಹ್ಮೇಂದ್ರರನ್ನು ಕುರಿತ ಪ್ರಬಂಧಗಳು, ಮಹಾಸ್ವಾಮಿಗಳು ರಚಿಸಿರುವ ಕೆಲವು ಸ್ತೋತ್ರಗಳು ಮತ್ತು ಆತ್ಮವಿದ್ಯಾವಿಲಾಸದ ಮೂಲ-ಅನುವಾದ ಇಲ್ಲಿ ಸೇರಿವೆ. ಅಧ್ಯಾತ್ಮಿಕ ಧನ್ಯತಾ ಭಾವವು ಓದುಗರಲ್ಲಿ ಮೂಡಿಸುವ ವಿಶೇಷ ಶೈಲಿ ಈ ಕೃತಿಯ ವೈಶಿಷ್ಟ್ಯವೂ ಆಗಿದೆ.  

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books