ಇಂದಿರಾತನಯ ಕಾವ್ಯನಾಮದಿಂದ ಬರೆಯುವ ಕಾದಂಬರಿಕಾರ ವಿ. ಆರ್. ಶ್ಯಾಂ ಅವರ ಕಾದಂಬರಿ-ಶಕ್ತಿ ಪೂಜೆ. ಮಾಟ-ಮಂತ್ರ-ವಾಮಾಚಾರದ ವಿಷಯವಾಗಿ ಈ ಲೇಖಕರು ಈ ಹಿಂದೆ ‘ಮಂತ್ರಶಕ್ತಿ’ ಎಂಬ ಕಾದಂಬರಿ ಬರೆದಿದ್ದು, ಅದರ ಮುಂದುವರಿದ ಭಾಗ ಎಂಬಂತೆ ಅದೇ ವಿಷಯ ಅನುಸರಿಸಿ ಬರೆದ ಕಾದಂಬರಿ ಇದು.
ಕ್ಷುದ್ರಶಕ್ತಿ ವಶಪಡಿಸಿಕೊಂಡವರ ಬದುಕಿನ ಚಿತ್ರಣ ಮಾತ್ರವಲ್ಲ; ಇಂತಹ ಶಕ್ತಿಯಲ್ಲಿ ನಂಬಿಕೆ ಇರದವನ ಬದುಕಿನ ಚಿತ್ರಣವನ್ನು ತಾಳೆ ಹಾಕುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಹಾಗಂತ; ಇಲ್ಲಿ ಮಾಟ-ಮಂತ್ರ-ಮಹೇಂದ್ರಜಾಲ-ಪ್ರೇತ ಸಂಭಾಷಣೆ ಎಲ್ಲವೂ ವಾಸ್ತವವೇನಲ್ಲ. ಓದುಗರು ನಂಬಲೇ ಬೇಕೆಂದಿಲ್ಲ. ಕಥಾವಸ್ತುವಿಗಾಗಿ ಈ ಸಾಮಗ್ರಿ ಬಳಸಿಕೊಂಡಿದೆ ಎಂದೂ ಲೇಖಕರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಮಾಂತ್ರಿಕ ಬರಹದಿಂದ ಓದುಗ ಬಳಗವನ್ನು ಸೃಷ್ಟಿಸಿಕೊಂಡ ಲೇಖಕ ವಿ.ಆರ್.ಶ್ಯಾಂ. ಇಂದಿರಾತನಯ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆದ ಇವರು ಸುಮಾರು 50ಕ್ಕೂ ಹೆಚ್ಚು ಕಾದಂಬರಿ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.ತಾಂತ್ರಿಕ ವಿಷಯದ ಬಗ್ಗೆ ಕುತೂಹಲಕಾರಿ ಕಾದಂಬರಿಗಳನ್ನು ರಚಿಸಿರುವ ಇಂದಿರಾತನಯ ತಮ್ಮ ಪ್ರಯೋಗಶೀಲತೆಯಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ಮೂಡಿಸಿದವರು. ಅವರ ಶಾಕ್ತ್ಯಪಂಥದ ಪ್ರಯೋಗಶೀಲ ಕೃತಿಗಳಾದ ‘ಮಂತ್ರಶಕ್ತಿ’, ಶಕ್ತಿಪೂಜೆ, ಸೇಡಿನಕಿಡಿ, ಹಾಗೂ ಪೂಜಾತಂತ್ರ ಅತ್ಯಂತ ಜನಪ್ರಿಯ ಕಾದಂಬರಿಗಳು. ಅವರ ‘ಚಕ್ರಾಯಣ’ ಸ್ವಾಮಿ ರಮಾನಂದರ ಹಿಮಾಲಯದ ತಪ್ಪಲಿನಲ್ಲಿ ಕೃತಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ...
READ MORE