ಶಕುಂತಲೆಯ ಸ್ವಗತ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 210

₹ 210.00




Year of Publication: 2023
Published by: ತನು ಮನು ಪ್ರಕಾಶನ
Address: ತನು ಮನು ಪ್ರಕಾಶನ, ನಂ.1267, 1 ನೇ ಕ್ರಾಸ್, 2 ನೇ ಹಂತ, ಶ್ರೀರಾಮಪುರ 2 ನೇ ಹಂತ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು - 570023
Phone: 9448056562

Synopsys

ಶಕುಂತಲೆಯ ಸ್ವಗತ ಸು.ರುದ್ರಮೂರ್ತಿ ಶಾಸ್ತ್ರಿ ಅವರ ಕೃತಿಯಾಗಿದೆ. ದುಷ್ಯಂತ ಬೇಟೆಗೆ ಬಂದವನು ಕಣ್ಣಾಶ್ರಮದಲ್ಲಿ ಶಕುಂತಲೆಯನ್ನು ಕಂಡು ಮೋಹಪರವರನಾಗಿ ಗಾಂಧರ್ವ ವಿವಾಹ ಮಾಡಿಕೊಂಡು ಅವಳೊಂದಿಗೆ ರಮಿಸಿ ಬೇಗ ಕರೆಸಿಕೊಳ್ಳುವುದಾಗಿ ಮಾತುಕೊಟ್ಟು ಹೊರಟುಹೋಗುತ್ತಾನೆ. ನಂತರ ಮರೆತೇಬಿಡುತ್ತಾನೆ. ಇಲ್ಲಿ ದುಷ್ಯಂತ ತಾನೇ ಮರೆಯಲಿಲ್ಲ. ದುರ್ವಾಸರ ಶಾಪದ ಕಾರಣವಾಗಿ ಮರೆತ ಎಂದು ಅವನ ಪರವಾಗಿ ಕಾಳಿದಾಸ, ನೆನಪು ಕೊಡಬೇಕಾದ ಉಂಗುರವೂ ಕಳೆದುಹೋದ ಪ್ರಸಂಗವನ್ನು ತರುತ್ತಾನೆ. ನಾನು ಮಹಾಭಾರತದ ಶಕುಂತಲೆಯ ಕಥೆಯ ಭಿತ್ತಿಯನ್ನು ತೆಗೆದುಕೊಂಡು ವಿಭಿನ್ನ ರೀತಿಯಲ್ಲಿ ಮನರಚನೆ ಮಾಡಲು ಪ್ರಯತ್ನಿಸಿದ್ದೇನೆ. ಮುಖ್ಯವಾಗಿ ಒಬ್ಬ ರಾಜನಿಂದಲೇ ವಂಚನೆಗೊಳಗಾದ ಶಕುಂತಲೆಯ ಮನಸ್ಥಿತಿಯ ಬಗ್ಗೆ, ಮಹರ್ಷಿ ಕಣ್ವರ ವಿಶೇಷ ವ್ಯಕ್ತಿತ್ವದ ಬಗ್ಗೆ, ಅನಸೂಯೆ, 'ಪ್ರಿಯಂವದೆ, ಗೌತಮಿಯ ಪಾತ್ರಪೋಷಣೆಗೆ ಹೆಚ್ಚು ಗಮನ ನೀಡಿದ್ದೇನೆ. ಮಹಾಭಾರತದ ಕಥೆ, ಕಾಳಿದಾಸನ ಪಾತ್ರಗಳು, ಒಂದೆರಡು ಕಥಾರೇಖೆಗಳನ್ನು ತೆಗೆದುಕೊಂಡು ಈ ಕಾದಂಬರಿ ತೀರ ಹೊಸಸೃಷ್ಟಿಯೇ ಆಗಿದೆ ಎಂದು ಸು. ರುದ್ರಮೂರ್ತಿ ಶಾಸ್ತ್ರಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books