ಶಂಪಾ ದೈತೋಟ

Author : ಬಾಲಕೃಷ್ಣ ಬೇರಿಕೆ

Pages 56

₹ 45.00




Year of Publication: 2019
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 288ನೇ ಕೃತಿ ’ಶಂಪಾ ದೈತೋಟ’. ಕರಾವಳಿ ಕರ್ನಾಟಕದ ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಚಿರಪರಿಚಿತರಾದ ಅವರು ಸಮಷ್ಟಿಯ ಹಿತಕ್ಕಾಗಿ ತುಡಿಯುತ್ತಿದ್ದ ಬಹುಮುಖ ವ್ಯಕ್ತಿತ್ವ ಅವರದು. ಪಾಣಾಜೆಯ ಪ್ರಸಿದ್ದ ಮೂಲಿಕಾ ವೈದ್ಯಪರಂಪರೆಯ ಮನೆತನದಲ್ಲಿ ಜನಿಸಿದ ಅವರು ಸಾಹಿತಿ, ಪತ್ರಕರ್ತ, ಪ್ರಯೋಗಶೀಲ ಕೃಷಿಕ, ಭಾಷಾಪ್ರೇಮಿ, ಪರಿಸರ ಹೋರಾಟಗಾರ, ಆಯುರ್ವೇದ ತಜ್ಞ, ಸಂಘಟಕ, ಸಂಪನ್ಮೂಲ ವ್ಯಕ್ತಿ ಹೀಗೆ ಹಲವು ಆಯಾಮಗಳಲ್ಲಿ ಬೆಳೆದುನಿಂತು ಛಲಗಾರ. ಜೀವಪರ ಪ್ರೀತಿಗೆ ಮಿಡಿಯುತ್ತಿದ್ದ ಶಂಪಾ ದೈತೋಟ ಜಾಗತೀಕರಣ, ಆಧುನೀಕರಣಗಳ ಸಾಧ್ಯತೆ ಮತ್ತು ಸವಾಲುಗಳ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದವರು.

About the Author

ಬಾಲಕೃಷ್ಣ ಬೇರಿಕೆ

ಕವಿ, ಬರಹಗಾರ ಬಾಲಕೃಷ್ಣ ಬೇರಿಕೆಅವರು ಪುತ್ತೂರು ತಾಲೂಕು ಪಾಣಾಜೆ ಗ್ರಾಮದ, ಬೆಳ್ತಂಗಡಿ ತಾಲೂಕು ಕೊಯೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕ. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರ. ಅವರ ಕನ್ನಡ ಮತ್ತು ತುಳು ಬರಹಗಳು ಹಲವು ಪತ್ರಿಕೆ, ಅಭಿನಂದನ ಸಂಪುಟ, ಸ್ಮರಣ ಸಂಚಿಕೆ, ಸಾಹಿತ್ಯ ವಾಚಿಕೆಗಳಲ್ಲಿ ಪ್ರಕಟವಾಗಿವೆ. ವಿದ್ಯಾರ್ಥಿ ದೆಸೆಯಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ದ.ರಾ. ಬೇಂದ್ರೆ ಸ್ಮತಿ ಕವನ ಸ್ಪರ್ಧೆ, ಮಣಿಪಾಲ ಸಾಹಿತ್ಯ ಸಂಘದ ಟಿ.ಎಂ.ಎ.ಪೈ ಸ್ಮಾರಕ ಕಾವ್ಯ ಸರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮತ್ತು ಪುತ್ತೂರು ತಾಲೂಕು ಕನ್ನಡ ...

READ MORE

Related Books