ಶಂಕರಾನಂದಯೋಗಿ ಮತ್ತು ಶಂಕರಾರ್‍ಯರ ತತ್ವಪದಗಳು

Author : ಎಸ್. ನಟರಾಜ ಬೂದಾಳು

Pages 288

₹ 55.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ರಂಗ, ಮಹಲಿಂಗರಂಗ, ಗುರುರಂಗ ಎಂಬ ಅಂಕಿತನಾಮದಿಂದ ಬರೆಯುವ ಶಂಕರಾನಂದರ ತತ್ವಪದಗಳನ್ನು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಾಡುತ್ತಾರೆ. ತುಮಕೂರು, ಚಿತ್ರದುರ್ಗ, ಮಂಡ್ಯ, ದಾವಣಗೆರೆ, ಹಾಸನ, ಮೈಸೂರು ಜಿಲ್ಲೆಗಳ ಎಲ್ಲ ಭಾಗಗಳಲ್ಲಿ ಅವರನ್ನು ಗುರುಸ್ವರೂಪಿಯಾಗು ಕಾಣುತ್ತಾರೆ. ಮಹಲಿಂಗರಂಗನ ಕರಸಂಜಾತನೆಂದು ಕರೆದುಕೊಳ್ಳುವ ಶಂಕರಾನಂದ ಯೋಗಿಗಳು ಕೈವಲ್ಯ ನವನೀತ, ಉತ್ತರ ಕೈವಲ್ಯ ನವನೀತ, ರಾಮಭಕ್ತಿಸಾರ ಎಂಬ ಕೃತಿಗಳನ್ನು ರಚಿಸಿದ್ದಾರೆ. 1833-1913ರ ನಡುವಿನ ಕಾಲಾವಧಿಯಲ್ಲಿ ಜೀವಿಸಿದ್ದ ಶಂಕರಾನಂದರು ತನ್ನನ್ನು ವಶಿಷ್ಠ, ಪರಾಶರ, ವ್ಯಾಸ, ಶುಕ, ಗೌಡಪಾದ, ಗೋವಿಂದ ಭಗವತ್ಪಾದರ ಪರಂಪರೆಯವರೆಂದು ಗುರುತಿಸಿಕೊಳ್ಳುತ್ತಾರೆ. ಅದ್ವೈತ ಪರಂಪರೆಯ ಕವಿ ಎಂಬುದು ತತ್ವಪದಗಳಿಂದ ಗೊತ್ತಾಗುತ್ತದೆ.

ಶಂಕರಾರ್ಯರೆಂದೇ ಸಾಧಕ ವಲಯದಲ್ಲಿ ಗುರುತಿಸಲಾಗುವ ವೇದಾಂತ ಶಿವರಾಮ ಶಾಸ್ತ್ರಿಗಳು ರಚಿಸಿದ ಶಂಕರತತ್ವ ಮತ್ತು ಶಂಕರಾನಂದ ಪದ್ಧತಿ ಎಂಬ ಕೃತಿಗಳಲ್ಲಿನ ಬಹುತೇಕ ತತ್ವಪದಗಳನ್ನು ಬಯಲುಸೀಮೆಯ ತತ್ವಪದಕಾರರು ಹಾಡುತ್ತಾರೆ. ಈ ತತ್ವಪದಗಳ ಹತ್ತಾರು ಹಸ್ತಪ್ರತಿಗಳು ಲಭ್ಯವಾಗಿವೆ. ಶಂಕರ, ಗುರುಶಂಕರ, ಶಂಕರಾರ್ಯ ಎಂಬ ಅಂಕಿತನಾಮದಿಂದ ಪದಗಳನ್ನು ರಚಿಸಿದ್ದಾರೆ. 

ಈ ಉಭಯ ಕವಿಗಳ ತತ್ವಪದಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books