ಶರಣು ಶರಣಾರ್ಥಿ ಗಜಲ್‌ಗಳು

Author : ಕಾಶೀನಾಥ ಅಂಬಲಗೆ

Pages 66

₹ 60.00




Year of Publication: 2019
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105

Synopsys

ಕಾಶೀನಾಥ ಅಂಬಲಗೆ ಅವರ ಗಜಲ್ ಸಂಕಲನ ‘ಶರಣು ಶರಣಾರ್ಥಿ ಗಜಲ್ ಗಳು’. ಈ ಕೃತಿಯಲ್ಲಿ ಸಾಹಿತ್ಯದ ಅಂಗಡಿಗಳಲ್ಲಿ, ಹೊಸ ಭಾವಗಳಿಗೆ ಜಾಗ, ಕೊಲೆಗಡುಕರು, ಕಾವ್ಯವೆಂದರೆ ಕನ್ಯೆ, ಸರಳ ಹೃದಯ, ಜಗದ ಭಾರ, ಮೌನ ತನ್ನದೇ, ಕಾವ್ಯಕ್ಕೆ ಹಳ್ಳಿಗ, ಹರಿದ ಬಟ್ಟೆ, ನಗೆ ನಗೆಯ, ಪ್ರತಿ ನೋವು, ಮನುಷ್ಯನಿದ್ದಾನೆ, ಆಕಾಶವೇ, ಹದಿನಾರು ಸಾವಿರ, ಮಧು ಬಟ್ಟಲು, ನಿನ್ನ ಬಾಹು, ಬೆಳದಿಂಗಳು, ಯುಗಗಳಿಂದ ದಾರಿ, ಗಗನದಲಿ ಹಾರುವಾಗ, ಊರ ಗೌಡನ, ಮುಲ್ಲಾ ಮೌಲ್ಕಿ, ರಾತ್ರಿಯಂಥ ರಾತ್ರಿ, ಹಗಲು ಹನ್ನೆರಡಕ್ಕೆ, ನನ್ನ ಮಾತುಗಳೇ, ಗೂಡು ಕಟ್ಟಿ, ಗೋಡೆಗಳು ತಡೆದಿಲ್ಲ, ಪ್ರೇಮದ ಮೊಗ್ಗುಗಳು ಸೇರಿದಂತೆ 37 ಗಜಲ್ ಗಳಿವೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books