ಶತಾಲಂಕಾರಕೃಷ್ಣಶತಕ ಮತ್ತು ಶಾರ್ದೂಲವಿಕ್ರೀಡಿಶತಕ

Author : ಹೆಚ್.ವಿ. ನಾಗರಾಜರಾವ್

Pages 104

₹ 90.00




Year of Publication: 2022
Published by: ಚಾರು ಸಾಂಸ್ಕೃತಿಕ ಪ್ರಕಾಶನ

Synopsys

ಹೆಚ್‌. ವಿ .ನಾಗರಾಜರಾವ್‌ರ ಕೃತಿಗ 'ಶತಾಲಂಕಾರಕೃಷ್ಣಶತಕಮ್' ಮತ್ತು 'ಶಾರ್ದೂಲವಿಕ್ರೀಡಿತಶತಕಮ್', ಈ ಮೊದಲೇ ಸಂಸ್ಕೃತಲಿಪಿ ವಿವರಣೆಗಳೊಂದಿಗೆ ಪ್ರಕಟವಾಗಿದ್ದವು. ಈಗ ಕನ್ನಡ ಲಿಪಿ ವಿವರಣೆಗಳೊಂದಿಗೆ ಪ್ರಕಟಗೊಳ್ಳುತ್ತಿವೆ. ಮೂಲಪಠ್ಯ ಮತ್ತು ಹೆಚ್ಚಿನ ಉದಾಹರಣೆ ಸಂಸ್ಕೃತದಲ್ಲಿದ್ದು, ಅವುಗಳ ಅನುವಾದ, ವಿವರಣೆಗಳು ಕನ್ನಡದಲ್ಲಿವೆ. ಕನ್ನಡ ಭಾಷಿಕರಲ್ಲಿ ಕಾವ್ಯಶಾಸ್ತ್ರವಿನೋದಿಗಳೂ ಪ್ರಯೋಜನ ಪಡೆಯಲೆಂಬುದು ಇಲ್ಲಿಯ ಸದಾಶಯ. ಸ್ವತಂತ್ರ ಹಾಗೂ ತುಲನಾತ್ಮಕ ಎರಡು ಮುಖಗಳಲ್ಲಿಯೂ ಉಪಯೋಗಕ್ಕೆ ಬರುವ ಸಾಹಿತ್ಯ ಸಾಮಗ್ರಿ ಇಲ್ಲಿದೆ. ನಮ್ಮ ಸಾಹಿತ್ಯ ಭಂಡಾರ ಹಿಗ್ಗಿದೆ. ಮೊದಲನೆಯ ಕೃತಿಯಲ್ಲಿ, ವಿವಿಧ ಛಂದಸ್ಸುಗಳನ್ನು ಬಳಸಿ ರಚಿಸಿದ ಕೃಷ್ಣಸ್ತುತಿ ವಸ್ತುವಾದ ನೂರಕ್ಕೂ ಹೆಚ್ಚಿನ ಸಂಸ್ಕೃತಪದ್ಯಗಳಿವೆ. ರಸಿಕಜನಮನೋಲ್ಲಾಸಿಯಾಗುವಂತೆ ಕೃಷ್ಣನ ಮಹಿಮೆಯನ್ನು ಮುಖ್ಯವಾಗಿ ವರ್ಣಿಸುತ್ತಲೇ, ಆಯ್ದ ನೂರು ಅಲಂಕಾರಗಳ ಲಕ್ಷಣಗಳಿಗೆ ಅವು ಲಕ್ಷವಾಗುವಂತೆಯೂ ಮಾಡಿರುವುದು ಈ ಪುಸ್ತಕದ ವಿಶೇಷ.

About the Author

ಹೆಚ್.ವಿ. ನಾಗರಾಜರಾವ್
(10 September 1942)

ಸಂಸ್ಕೃತ ವಿದ್ವಾಂಸ ಹೆಚ್‌.ವಿ. ನಾಗರಾಜರಾವ್‌  ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ (10-9-1942) ಹುಟ್ಟಿದರು. ಎರಡೂವರೆ ವರ್ಷದ ಬಾಲಕರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಜ್ಜನ ಮನೆಯಲ್ಲಿ ಬೆಳೆದರು. ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯಲ್ಲಿ ದುಡಿದರು. ವಿದ್ಯಾಗುರು ವಿದ್ವಾನ್‌ಎನ್‌.ವಿ. ಅನಂತರಾಮಯ್ಯನವರು ಇವರಿಗೆ ನೆರವಾಗುತ್ತಾರೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾಗಿ ಮೈಸೂರಿಗೆ ಬಂದು ಸಂಸ್ಕೃತ ಮಹಾ ಪಾಠಶಾಲೆ ಸೇರಿ, ಅಲಂಕಾರ ಶಾಸ್ತ್ರಗಳನ್ನು ಕಲಿತರು.  ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು.  ಇವರ ವ್ಯಾಕರಣ ಗುರು ವಿದ್ವಾನ್‌ ಸೋ. ರಾಮಸ್ವಾಮಿ ಅಯ್ಯಂಗಾರ್‌ ಅವರು ತಮ್ಮಲ್ಲಿ ಕಲಿಯಲು ಬಂದ ...

READ MORE

Related Books