ಶಿಕ್ಷಣತಜ್ಞರ ಅಭಿಪ್ರಾಯಗಳ ಒಂದು ಚಿಂತನೆ

Author : ಉದಯ್ ಕುಮಾರ್ ಹಬ್ಬು

Pages 106

₹ 75.00




Year of Publication: 2015
Published by: ಛಾಯಾ ಸಾಹಿತ್ಯ
Address: #993, 1ನೇ ಮುಖ್ಯ ರಸ್ತೆ, ಎಂ. ಸಿ ಲೇಔಟ್‌ ವಿಜಯನಗರ ಬೆಂಗಳೂರು - 560040
Phone: 8971227876

Synopsys

ಸಾಹಿತಿ ಉದಯ್‌ ಕುಮಾರ್‌ ಹಬ್ಬು ಅವರು ಶಿಕ್ಷಣದ ಕುರಿತ ಮಹಾನ್‌ ಚಿಂತಕರ ಆಲೋಚನೆಗಳನ್ನು ವ್ಯವಸ್ಥಿತವಾಗಿ ಕ್ರೋಢಿಕರಿಸಲಾಗಿರುವ ಕೃತಿ- ಶಿಕ್ಷಣತಜ್ಞರ ಅಭಿಪ್ರಾಯಗಳ ಒಂದು ಚಿಂತನೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಮದನ್‌ ಹೆಚ್‌. ‘ಈ ಹೊತ್ತಗೆಯು ಮಹಾನ್‌ ಶೈಕ್ಷಣಿಕ ಚಿಂತಕರಾದ ಬುದ್ಧ, ಕನ್ಪೂಶಿಯಸ್‌, ನಾರಾಯಣಗುರು, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ ಮುಂತಾದ ಚಿಂತಕರ ಶೈಕ್ಷಣಿಕ ವಿಚಾರಗಳು ಕ್ರೋಢಿಕೃತಗೊಂಡು, ಶಿಕ್ಷಣ ತಜ್ಞರಿಗೆ ಅನುಕೂಲವಾಗುವಂತಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಷೇತ್ರದಲ್ಲಿ ಅಧ್ಯಾಪಕರಾಗಿ ದುಡಿಯುತ್ತಿರುವವರಿಗೆ ದೀವಟಿಗೆಯಂತಿದೆ. ಇಂತಹ ಒಂದು ಪುಸ್ತಕ ಈ ಹಿಂದೆ ಶಿಕ್ಷಣದ ಕುರಿತಾಗಿ ಬಂದದ್ದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books