ಶಿಶುನಾಳ ಶರೀಫರ ಪಾರಮಾರ್ಥಿಕ ಚಿಂತನೆ

Author : ನಿಷ್ಠಿ ರುದ್ರಪ್ಪ

Pages 128

₹ 100.00




Year of Publication: 2019
Published by: ಶ್ರೀ ಪ್ರಭುದೇವರ ಜನಕಲ್ಯಾಣ ಸಂಸ್ಥೆ
Address: ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ, ಸಂಡೂರು, ಜಿಲ್ಲೆ: ಬಳ್ಳಾರಿ

Synopsys

ಲೇಖಕ ನಿಷ್ಠಿ ರುದ್ರಪ್ಪ ಅವರು ರಚಿಸಿದ ಕೃತಿ-ಶಿಶುನಾಳ ಶರೀಫರ ಪಾರಮಾರ್ಥಿಕ ಚಿಂತನೆ. ಭಾವೈಕ್ಯತೆಯ ತವನಿಧಿ ಶಿಶುನಾಳ ಶರೀಫ ಸಾಹೇಬರ ತತ್ವಪದಗಳ ಆಧಾರದ ಮೇಲೆ ಈ ಕೃತಿಯು ರಚನೆಗೊಂಡಿದೆ. ಭಿನ್ನತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ, ಅಗಲಿಸುವವರ ನಡುವೆ ಕೂಡಿ ಬದುಕನ್ನು ಸಾಧಿಸಿದ ಮಹೋನ್ನತ ವ್ಯಕ್ತಿತ್ವದ ಶರೀಫರ ತತ್ವಪದಗಳ ದೃಷ್ಠಿಕೋನದಲ್ಲಿ ಎರಡು ತತ್ವಗಳನ್ನು ಸಮನ್ವಯಿಸುವ ಕೆಲಸವನ್ನು ಈ ಕೃತಿಯು ಮಾಡಿದೆ. ಶರೀಫರ ತತ್ವಪದಗಳು ನಾಡಿನಲ್ಲಿ ಜನಜನಿತಗೊಂಡಿವೆ. ಆದರೂ ಕೆಲವೊಂದು ಕಿಡಿಗೇಡಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಲ್ಲಿ ವಿಘ್ನಸಂತೋಷಿಗಳಂತೆ ವರ್ತಿಸಿ, ನಮ್ಮ ನಾಡಿನ ಸಾಂಸ್ಕೃತಿಕ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ. ಶರೀಫರನ್ನು ಸರಿಯಾಗಿ ತಿಳಿದು ಕೊಂಡಲ್ಲಿ ಕಿಡಿಗೇಡಿಗಳ ಅಟ್ಟಹಾಸ ತಾನೇತಾನಾಗಿ ಗೌಣವಾಗುತ್ತದೆ. ಶರೀಫರ ತತ್ವಪದಗಳ ಚಿಂತನೆ ಮತ್ತು ಅದರಲ್ಲೂ ಪಾರಮಾರ್ಥಿಕ ಅಂತಿಮ ಸತ್ಯವನ್ನು ಅರಿಯುವುದೇ ಎಲ್ಲಾ ಧರ್ಮಗಳ ಮೂಲವಾಗಿದೆ ಎಂದೂ ಈ ಕೃತಿ ಪ್ರತಿಪಾದಿಸುತ್ತದೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books