ಶ್ರೇಯಸ್ಸು

Author : ವಿಜಯಕುಮಾರ್‌ ಧ. ನೇರ್ಲೆಕರ್‌

Pages 203

₹ 150.00




Year of Publication: 2019
Published by: ಸುವರ್ಣ ಮಹೋತ್ಸವ ಆಚರಣ ಸಮಿತಿ
Address: ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆ, ಶ್ರೀಕ್ಷೇತ್ರ ಧರ್ಮಸ್ಥಳ

Synopsys

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-14ರ ಭಾಗವಾಗಿ ಲೇಖಕ ವಿಜಯಕುಮಾರ ಧ. ನೇರ್ಲೆಕರ್ ಅವರು ರಚಿಸಿದ ಕೃತಿ-ಶ್ರೇಯಸ್ಸು. ಸಿಂಡಿಕೇಟ್ ಬ್ಯಾಂಕ್ ಸಹಾಯಕ ಪ್ರಬಂಧಕ ಹಾಗೂ ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ದನ್ ಅವರು ಕೃತಿಗೆ ಮುನ್ನುಡಿ ಬರೆದು ‘ ರುಡ್ ಸೆಟ್ ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಅಭಿವೃದ್ಧಿಯಡಿ ನಿರುದ್ಯೋಗ ನಿವಾರಣೆಯತ್ತ ಇರುವ ಕಳಕಳಿಯನ್ನು ಈ ಕೃತಿಯು ಸಮರ್ಥವಾಗಿ ದಾಖಲಿಸಿದೆ’ ಎಂದು ಪ್ರಶಂಸಿಸಿದ್ದಾರೆ.

ರುಡ್ ಸೆಟ್ ನೊಂದಿಗಿನ ಸಂಪರ್ಕ, ಸಂಬಂಧಗಳನ್ನು ಹಾಗೂ ಈ ಸಂಸ್ಥೆ ಬೆಳೆಸುವಲ್ಲಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ಮೌಲಿಕ ಮಾರ್ಗದರ್ಶನ ಕುರಿತು ಮಾತ್ರವಲ್ಲ; ರುಡ್ ಸೆಟ್ ಧ್ಯೇಯೋದ್ದೇಶ, ರುಡ್ ಸೆಟ್ ಪರಿಕಲ್ಪನೆ, ಆಡಳಿತ ವೈಖರಿ, ಯಶಸ್ಸಿನ ರೂವಾರಿ, ಉದ್ಯಮಶೀಲತಾ ತಿಳಿವಳಿಕೆ ಮತ್ತು ಪ್ರೇರಣಾ ಶಿಬಿರ, ರುಡ್ ಸೆಟ್ ಬಜಾರ್ ಮತ್ತು ಮಳಿಗೆಗಳು, ರುಡ್ ಸೆಟ್ ಮಾದರಿ : ಸಮನ್ವಯತೆಯೊಂದಿಗೆ ಕಾರ್ಯನಿರ್ವಹಣೆ, ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿ, ಸ್ವ-ಉದ್ಯೋಗಿಗೆ ಕಿವಿಮಾತು, ಸ್ವ ಉದ್ಯಮಿ-ಆತ್ಮನಿರೀಕ್ಷಣೆ, ಸ್ವ-ಉದ್ಯೋಗದಲ್ಲಿ ಯಶಸ್ವಿಯಾಗಲು ಸೂತ್ರಗಳು ಹೀಗೆ ವೈವಿಧ್ಯಮಯವಾದ ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ವಿಜಯಕುಮಾರ್‌ ಧ. ನೇರ್ಲೆಕರ್‌

ಲೇಖಕ ವಿಜಯಕುಮಾರ್‌ ಧ. ನೇರ್ಲೆಕರ್‌  ಅವರು ಬಿ.ಎಸ್ಸಿ. ಕೃಷಿ ಪದವೀಧರರು. ಭಾರತೀಯ ಬ್ಯಾಂಕ್‌ ಒಕ್ಕೂಟದ ಸಿ.ಎ.ಐ.ಐ.ಬಿ ಪದವೀಧರರು.  ಸಿಂಡಿಕೇಟ್‌ ಬ್ಯಾಂಕಿನಲ್ಲಿ 1980 ರಲ್ಲಿ ಗ್ರಾಮೀಣ ಅಭಿವೃದ್ದಿ ಅಧಿಕಾರಿಯಾಗಿ ವೃತ್ತಿ ಆರಂಭಿಸುವ ಲೇಖಕರು, ಶಾಖಾ ಪ್ರಬಂಧಕರಾಗಿ, ಅಗ್ರಣೀಯ ಬ್ಯಾಂಕ್‌ ಪ್ರಬಂಧಕರಾಗಿ ದೆಹಲಿಯ ಬ್ಯಾಂಕ್‌ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಉಪನ್ಯಾಸಕರಾಗಿ, 2015 ರಲ್ಲಿ ಸಹಾಯಕ ಮಹಾಪ್ರಬಂಧಕರಾಗಿ ನಿವೃತ್ತಿ ಹೊಂದಿರುತ್ತಾರೆ. ಉದ್ಯಮಶೀಲತೆ ಅಭಿವೃದ್ಧಿ ತರಬೇತುದಾರರಾಗಿರುವ ಲೇಖಕರು, ಉದ್ಯಮಶೀಲತೆಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿರುವರು. ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ಕುರಿತು ಅವರ ಲೇಖನಗಳು ವ್ರತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. ಕೃತಿಗಳು: ಶ್ರೇಯಸ್ಸು (ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಮಗ್ರ ...

READ MORE

Related Books