ಶ್ರೀಕೃಷ್ಣ ಚರಿತಾಮೃತ

Author : ಗೋಪಾಲ ಭಟ್ ಸಿ.ಯಚ್

Pages 802

₹ 700.00




Year of Publication: 2020
Published by: ಗೋಪಾಲಭಟ್ ಸಿ.ಯಚ್
Address: “ಅಭ್ಯುದಯ”,ಪರ್ಳಳದ ಮೂಲೆ, ನೆಕ್ರಾಜೆ ಶ್ರೀಕೃಷ್ಣ ದೇವಾಲಯದ ರಸ್ತೆ, ಅಂಚೆ ನೆಕ್ರಾಜೆ, 671544 ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ
Phone: 9745492565

Synopsys

ಗೋಪಾಲ ಭಟ್.ಸಿ.ಹೆಚ್ ಅವರ ‘ಶ್ರೀಕೃಷ್ಣ ಚರಿತಾಮೃತ’ ಕಾವ್ಯ ಮಾಲೆಯ ಗ್ರಂಥವಾಗಿದೆ. ಶ್ರೀಕೃಷ್ಣನ ಮಹಿಮೆಯನ್ನು ಜೀವನ ಚರಿತ್ರೆಯ ಅನೇಕ ಸಂಭವಗಳನ್ನು ಲೇಖಕರು ಭಾವಕ್ಕೆ ತಕ್ಕಂತೆ ಕಾವ್ಯ ರೂಪವನ್ನು ನೀಡಿ ವ್ಯಾಖ್ಯಾನಿಸಿದ್ದಾರೆ. ಈ ಕೃತಿಗೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಅನುಗ್ರಹ ಸಂದೇಶವನ್ನು ಬರೆದಿದ್ದಾರೆ. ಮೈಸೂರಿನ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷ ಮತ್ತುಸ್ವಾಮಿ ಎಂ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ವಸುದೇವ-ದೇವಕಿಯರ ಮದುವೆ ದಿಬ್ಬಣ, ಶ್ರೀ ಖರಷ್ಣ ಜನ್ಮಕಾಲದ ಶುಭ ಸೂಚನೆ, ಶ್ರೀ ಕೃಷ್ಣನ ಜನನ, ಕಂಸನ ಪ್ರಲಾಪ, ಪೂತನೀ ಸಂಹಾರ, ತೃಣಾವರ್ಥನ ಸಂಹಾರ, ಶ್ರೀಕೃಷ್ಣನ ಬಾಲ ಲೀಲೆಗಳು, ಅಮ್ಮನಿಗೆ ವಿಶ್ವ ರೂಪ, ಧೇನುಕಾಸುವ ವಧೆ, ಕಾಳಿಯ ಮರ್ಧನ ಹೀಗೆ ಒಟ್ಟು 172 ಶೀರ್ಷಿಕೆಗಳು ಈ ಕೃತಿ ಪರಿವಿಡಿಯಲ್ಲಿದೆ. 'ಶ್ರೀ ಕೃಷ್ಣ ಚರಿತಾಮೃತ" ಎಂಬ ಮೂರು ಸಾವಿರದ ಇನ್ನೂರಕ್ಕಿಂತಲೂ ಅಧಿಕ ಷಟ್ಪದಿಯನ್ನೊಳಗೊಂಡ, ಕಾವ್ಯ ಮಾಲೆ ಇದಾಗಿದೆ.

About the Author

ಗೋಪಾಲ ಭಟ್ ಸಿ.ಯಚ್
(11 April 1957)

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಡ್ನೂರು ಗ್ರಾಮದ ಚಣಿಲ ಎಂಬಲ್ಲಿ ದಿ! ಕಜೆ ತಿಮ್ಮಣ್ಣ ಭಟ್ಟ- ದಿ! ಸರಸ್ವತಿ ಅಮ್ಮನವರ ಕೊನೆಯ ಪುತ್ರನಾಗಿ 11--4--1957 ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಸಮೀಪದ ಕೋಡಪದವಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ಶಿಕ್ಷಣ ಮಂಗಳೂರಿನ ಜೆಪ್ಪುವಿನಲ್ಲಿದ್ದ ಕಾಸಿಯಾ ಪ್ರೌಢಶಾಲೆ ಯಲ್ಲಾಯಿತು.ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನುಪಡೆದರು. ಮಂಗಳೂರು ಶಿಕ್ಷಕ ತರಬೇತಿ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ತರಬೇತಿ. ವಿಟ್ಲ ಸಮೀಪದ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹಾಸ್ಟೆಲ್ ವಿಭಾಗದಲ್ಲಿ ಸಹಾಯಕ ಅಧ್ಯಾಪಕನಾಗಿ ನಿಯುಕ್ತಿಗೊಂಡೆ. ಬಳಿಕ 1980ನೇ ಇಸವಿಯಲ್ಲಿ ಕಾಸರಗೋಡಿನ ...

READ MORE

Related Books