ಶ್ರೇಷ್ಠ ಪುಸ್ತಕೋದ್ಯಮಿ: ಮ. ಗೋವಿಂದರಾವ್

Author : ಶ್ರೀನಿವಾಸ ಹಾವನೂರ

Pages 100

₹ 0.00




Year of Publication: 1996
Published by: ಸಾಹಿತ್ಯ ಭಂಡಾರ
Address: ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ ಬೆಂಗಳೂರು - 560053

Synopsys

ಶ್ರೀನಿವಾಸ ಹಾವನೂರ ಅವರು ಸಂಪಾದಿಸಿರುವ ಕೃತಿ ‘ಶ್ರೇಷ್ಠ ಪುಸ್ತಕೋದ್ಯಮಿ: ಮ. ಗೋವಿಂದರಾವ್’ ಸಾಹಿತ್ಯ ಭಂಡಾರ ಪ್ರಕಾಶನದಿಂದ ಪ್ರಕಟವಾಗಿದೆ. ಕೃತಿಯ ಕುರಿತು ಬರೆದಿರುವ ಶ್ರೀನಿವಾಸ ಹಾವನೂರರು ಮಂ. ಗೋವಿಂದರಾಯರು ತೀರಿ ಹೋಗಿ ಕೆಲವು ತಿಂಗಳಾದ ಮೇಲೆ ಅವರ ಬಗ್ಗೆ ಅಥವಾ ಅವರ ನೆನಪು ಉಳಿಯುವಂತೆ ಯಾರಾದರೂ ಸ್ಮರಣ ಗ್ರಂಥವನ್ನು ತರುವವರಿದ್ದಾರೆಯೇ ಎಂದು ಅವರ ಮಗ ರಾಜಾನನ್ನು ವಿಚಾರಿಸಿದೆ. ಹಾಗೇ ಇದುವರೆಗೆ ಯೋಚಿಸಿದುದಿಲ್ಲ. ನೀವೇ ಯಾಕೆ ಆ ಕೆಲಸ ಮಾಡಬಾರದು. ಎಂದು ಕೇಳಿದರು. ಅವರ ಬಗೆಗಿನ ನನ್ನ ಅದರ ಭಾವವನ್ನು ವ್ಯಕ್ತಪಡಿಸಲು ಇದೊಂದು ಅವಕಾಶ ಎಂದು ಬಗೆದು, ಮರುಮಾತಿಲ್ಲದೆ ಒಪ್ಪಿಕೊಂಡೆ. ಅವರ ಸಂಪರ್ಕ ಬಂದವರಿಗೆ ಹಾಗೂ ಅವರ ಸಂಬಂಧಕರಿಗೆ ಪತ್ರ ಬರೆದದ್ದಾಯಿತು. ಯಾರೊಬ್ಬರೂ ನಿಷ್ಕ್ರಿಯರಾಗಿ ಉಳಿಯದೇ ಬರೆದು ಕಳಿಸಿದರು. ಇನ್ನೂ ಕೆಲವರು ಇವರನ್ನು ಕುರಿತು ಈಗಾಗಲೇ ತಾವು ಬರೆದದ್ದನ್ನು ಅವಶ್ಯವಾಗಿ, ಹೇಗೆ ಬೇಕೋ ಹಾಗೇ ಉಪಯೋಗಿಸಿಕೊಳ್ಳಿರಿ ಎಂದು ತಿಳಿಸಿದರು. ಗೋವಿಂದರಾಯರ ಬದುಕು ಹಾಗೂ ಉದ್ಯಮ ಏಕಮುಖವಾದದ್ದು, ಅದರಲ್ಲಿ ಅವರು ತೋರಿದ ಪ್ರಾಮಾಣಿಕತೆ, ಸತ್ಯ ನಿಷ್ಠುರತೆ ಇವು ಸಾಮಾನ್ಯವಾಗಿ ಎಲ್ಲರ ಬರಹಗಳಲ್ಲಿ ಬರಬೇಕಾದದ್ದು ಸಹಜವೇ, ಆದ್ದರಿಂದ ಪುನರುಕ್ತಿಗಳನ್ನು ತೊರೆದು, ವಾಚನೀಯತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ, ಅಲ್ಲಲ್ಲಿ ಕೆಲವು ಭಾಗಗಳನ್ನು ಕೈಬಿಡುವುದು ಅನಿವಾರ್ಯವಾಯಿತು. ಅದಕ್ಕಾಗಿ ಆ ಆ ಲೇಖಕರ ಕ್ಷಮೆ ಕೇಳುವೆ ಎಂದಿದ್ದಾರೆ. ಹಾಗೇ ಕೈಬಿಟ್ಟಿದ್ದರಿಂದ, ಗೋವಿಂದರಾಯರ ಬಗ್ಗೆ ಅವರು ಗಳಿಸಿದ್ದ ಸದ್ಭಾವಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿಯಾಗದು. ಗೋವಿಂದರಾಯರ ಕಾರ್ಯದ ಮಹತ್ವ, ವಿಶೇಷತೆಗಳು ಸ್ಪಷ್ಟವಾಗಬೇಕಾದರೆ ಪುಸ್ತಕೋದ್ಯಮ ಬೆಳೆದು ಬಂದ ಬಗೆಯನ್ನು ಕೊಡುವುದು ಅವಶ್ಯವೆನಿಸಿತು. ಅದನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಮ. ಗೋವಿಂದರಾವ್ ಅವರ ನನ್ನ ಆರಂಭ ಜೀವನ, ಒಡನಾಡಿ-ಬಂಧುಗಳು ಕಂಡಂತೆ, ಆತ್ಮೀಯ ನೆನಹುಗಳು, ಬಂಧುಗಳು-ಆತ್ಮೀಯರು ಕಂಡಂತೆ, ಇದು ನನ್ನ ಕಥೆ- ಸಾಹಿತ್ಯ ಭಂಡಾರ, ಶ್ರೀನಿವಾಸ ಹಾವನೂರರ ಪುಸ್ತಕ ವ್ಯವಸಾಯವು ಸಾಗಿಬಂದ ದಾರಿ ಲೇಖನಗಳು ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books