ಶ್ರೀ ಅರವಿಂದರ ಸಾವಿತ್ರಿ

Author : ಕೋ. ಚೆನ್ನಬಸಪ್ಪ

Pages 889

₹ 400.00




Year of Publication: 1994
Published by: ಶ್ರೀ ಅರವಿಂದ ಪ್ರಕಾಶನ
Address: ಬೆಂಗಳೂರು

Synopsys

ತತ್ವಜ್ಞಾನಿ, ಕವಿ, ಸ್ವತಂತ್ರ್ಯ ಹೋರಾಟಗಾರ, ಯೋಗಿ ಶ್ರೀಅರವಿಂದರು ರಚಿಸಿದ ಯೌಗಿಕ ಮಹಾಕಾವ್ಯ ಸಾವಿತ್ರಿಯನ್ನು ಚೆನ್ನಬಸಪ್ಪನವರು ಕನ್ನಡಕ್ಕೆ ಸರಳ ಭಾಷೆಯಲ್ಲಿ ಅನುವಾದಿಸಿದ್ದಾರೆ. ಅರವಿಂದರ ಯೌಗಿಕಾನುಭವಗಳು ಇಲ್ಲಿ ಕಾವ್ಯರೂಪದಲ್ಲಿ ಮೈತಳೆದಿವೆ. ಮಹಾಭಾರತದ ಕಥಾಸೂತ್ರವನ್ನೇ ಇಟ್ಟುಕೊಂಡು ಯೋಗದರ್ಶನವನ್ನು ಕಾವ್ಯಮಯವಾಗಿ ಚಿತ್ರಿಸಿದ್ದಾರೆ. ಪ್ರಾರ್ಥನೆ.. ಮಹಾಕಾರ್ಯ, ಮಹಾಭಾವ ಇವು ಮನುಷ್ಯನ ಅತೀತಶಕ್ತಿಯೊಡನೆ ಸೇರಿಸುವ ದಿವ್ಯ ಶಕ್ತಿಗಳೆಂಬುದನ್ನು ಸಾವಿತ್ರಿ ಬಾಲ್ಯದಲ್ಲಿಯೇ ಅರಿತಿದ್ದಳು. ಅವಳು ಮೃತ್ಯುವನ್ನು ಪ್ರಜ್ಞಾಪೂರ್ವಕವಾಗಿ ಗೆದ್ದು ತಪಶ್ಯಕ್ತಿಯ ಹಿರಿಮೆಯನ್ನು ತೋರಿದ ಮಹಾಯೋಗಿನಿ. ಅವಳ ಯೋಗಸಾಧನೆಯನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Related Books