ಶ್ರೀರಾಮದಾಸರ ಬದುಕು ಮತ್ತು ಸಾಹಿತ್ಯ

Author : ಸ್ವಾಮಿರಾವ್ ಕುಲಕರ್ಣಿ

Pages 312

₹ 150.00




Year of Publication: 2012
Published by: ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನ
Address: ನಂಜನಗೂಡು

Synopsys

‘ಶ್ರೀರಾಮದಾಸರ ಬದುಕು ಮತ್ತು ಸಾಹಿತ್ಯ’ ಸ್ವಾಮಿರಾವ ಕುಲಕರ್ಣಿಯವರು ಪಿಎಚ್.ಡಿ ಪದವಿಗಾಗಿ ರಚಿಸಿದ ಮಹಾಪ್ರಬಂಧ. ಈ ಕೃತಿಗೂ ಮೊದಲು ಈ ವಿಷಯದ ಮೇಲೆ ಅಲ್ಲಲ್ಲಿ ಬಿಡಿಲೇಖನಗಳು, ಚಿಕ್ಕ ಹೊತ್ತಿಗೆಗಳು ಬಂದರೂ, ಇದೇ ಮೊದಲಬಾರಿಗೆ ಡಾ. ಸ್ವಾಮಿರಾವ ಕುಲಕರ್ಣಿ ಅವರು ಅಮೂಲಾಗ್ರವಾಗಿ ಶ್ರೀರಾಮದಾಸರ ಜೀವನ ಮತ್ತು ಕೃತಿಗಳ ಕುರಿತು ವ್ಯಾಪಕವಾದ ಕ್ಷೇತ್ರಕಾರ್ಯ ನಡೆಸಿ, ತಲಸ್ಪರ್ಶಿಯಾದ ಅಧ್ಯಯನ ಕೈಗೊಂಡದ್ದು ಇಲ್ಲಿ ಕಾಣಬಹುದು.

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books