ಶ್ರೀ ಶ್ರೀಹರಿ ದತ್ತ ಭಜನಾಮೃತ

Author : ಎಂ.ಜಿ. ದೇಶಪಾಂಡೆ

Pages 112

₹ 50.00




Year of Publication: 2010
Published by: ಶ್ರೀಹರಿ ಪ್ರಕಾಶನ
Address: # 15-03-102, ಲಕ್ಷ್ಮಿನಿಲಯ, ರಾಂಪೂರೆ ನಗರ, ಮನ್ನಳ್ಳಿ ರಸ್ತೆ, ಬೀದರ-585403
Phone: 8971067233

Synopsys

ಶ್ರೀ ಶ್ರೀಹರಿ ದತ್ತ ಭಜನಾಮೃತ-ಎಂಬುದು ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ. ಭಜನೆ ಮಾಲೆಯ ಸರಣಿ ಇದು. ಶ್ರೀ ಭೀಮಾಶಂಕರ್ ಸುಪ್ರಭಾತ ಗೀತೆಗಳನ್ನು ಒಳಗೊಂಡ ಆಧ್ಯಾತ್ಮಕ ಕಾವ್ಯಸಂಕಲನ. ಪರಮಪೂಜ್ಯ ಅವತಾರಿ ಪೂಜ್ಯ ಶ್ರೀ ಜಗನ್ನಾಥ ಮಹಾರಾಜರು ಹೊಕ್ರಾಣಾ' ಬಿ' ಇವರು ಸಾಮಾನ್ಯರಾಗಿ ಜನಿಸಿ ಗೃಹಸ್ಥರಾಗಿ ತಮ್ಮ ಪ್ರಪಂಚದಲ್ಲಿಯೇ ಪಾರಮಾರ್ಥವನ್ನು ಮೈಗೂಡಿಸಿಕೊಂಡು ಈಗ ಸಂತ ಅವತಾರಗಳಾಗಿ ಬೆಳಗುತ್ತಿದ್ದಾರೆ. ಇವರು ಹೊಕ್ರಾಣಾ ಬಿ, ಬೀದರ್ ಹಾಗೂ ದೇವರ ಕಂದಿ ನಗರಗಳಲ್ಲಿ ದತ್ತಮಂದಿರ, ನವನಾಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಆ ನಿಟ್ಟಿನಲ್ಲಿ ಈ ಭಜನಾಮೃತ ಕೃತಿಯು ಅನೇಕ ಭಜನೆ ಹಾಡುಗಳ ಸಂಗ್ರಹವಾಗಿದ್ದು ಇಲ್ಲಿ ಮಂದಿರಗಳಿಗೆ ಪ್ರತಿ ಗುರುವಾರ ಭಕ್ತರು ಆಗಮಿಸಿ ಈ ಹಾಡುಗಳನ್ನು ಹಾಡುತ್ತಾರೆ. ಈ ಕೃತಿಯು ಅಧ್ಯಾತ್ಮದ ಕಾವ್ಯಸಂಗ್ರಹವೂ ಹೌದು.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books