ಶ್ರೀ ವೀರಣ್ಣ ಪಡಶೆಟ್ಟಿ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 88

₹ 60.00




Year of Publication: 2013
Published by: ಜೇವರ್ಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್
Address: ಜೇವರ್ಗಿ, ಜಿಲ್ಲೆ ಕಲಬುರಗಿ

Synopsys

‘ಸರಳ ಸಜ್ಜನ ವ್ಯಕ್ತಿ ಶ್ರೀ ವೀರಣ್ಣ ಪಡಶೆಟ್ಟಿ’ ಎಂಬುದು ಲೇಖಕ ಸುಭಾಷ್ಚಂದ್ರ ಕಶೆಟ್ಟಿ ಬಾಚನಾಳ ಅವರು ಬರೆದ ಕೃತಿ. ಶ್ರೀ ವೀರಣ್ಣ ಪಡಶೆಟ್ಟಿ ಎಂಬುವರ ಜೀವನ ಚರಿತ್ರೆ ಇದು. ವೀರಣ್ಣ ಪಡಶೆಟ್ಟಿ ಅವರ ಜನನ ವೃತ್ತಾಂತ, ಪಡಶೆಟ್ಟಿ ಅವರ ಬಾಲ್ಯದ ದಿನಗಳು, ಕುಟುಂಬ ವಿಸ್ತಾರ, ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿದ ಸೇವೆ, ಕನ್ನಡ ಸಾಹಿತ್ಯ ಪರಿಷತ್ತುನೊಂದಿಗೆ ವೀರಣ್ಣ ಪಡಶೆಟ್ಟಿ ಅವರ ನಂಟು, ಕನ್ನಡ ಸಾಹಿತ್ಯ ಕೃತಿಗಳ ರಚನೆ ಮತ್ತು ಸಂಪಾದನೆ, ಥಿಯಾಸಾಫಿಕಲ್ ಸೊಸೈಟಿ ಕಾರ್ಯದಲ್ಲಿ ತೊಡಗುವಿಕೆ, ಗಮಕ ಕಲೆಗೆ ನೀಡಿದ ಪ್ರೋತ್ಸಾಹದ ಕುರಿತು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books