ಶ್ರೀ ಕೃಷ್ಣದೇವರಾಯ ವಿರಚಿತ ಜಾಂಬವತೀ ಪರಿಣಯ

Author : ಬಿ.ಎನ್. ಸುಮಿತ್ರಾಬಾಯಿ

Pages 119

₹ 100.00




Year of Publication: 2008
Published by: ದ್ರಾವಿಡ ವಿಶ್ವ ವಿದ್ಯಾನಿಲಯ ಕುಪ್ಪಂ
Phone: 9886407011

Synopsys

ಬಿ.ಎನ್. ಸುಮಿತ್ರಾಬಾಯಿ ಅವರ ಅನುವಾದಿತ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ ಜಾಂಬವತೀ ಪರಿಣಯ. ಭಾರತೀಯ ಸಂಸ್ಕೃತಿಯ ತಾಯಿಬೇರು ದ್ರಾವಿಡ ಸಂಸ್ಕೃತಿಯಲ್ಲಿದೆ.ಕನ್ನಡ ದಲ್ಲಿ ನಾಟಕ ಪ್ರಕಾರ ಅನುವಾದಗಳ ಮೂಲಕವೇ ಮೂಡಿಬಂದಿರುವುದು ತಿಳಿದಿರುವ ವಿಚಾರವೇ ಆಗಿದೆ,ಈ ನಿಟ್ಟಿನಲ್ಲಿ ಸಂಸ್ಕೃತ ನಾಟಕಗಳ ಕೊಡುಗೆ ಅಮೂಲ್ಯ ವೆನಿಸುತ್ತದೆ.ಪ್ರಸ್ತುತ ಶ್ರೀ ಕೃಷ್ಣದೇವರಾಯ ಸಂಸ್ಕೃತದಲ್ಲಿ ಬರೆದ ' ಜಾಂಬವತೀಪರಿಣಯ ' ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿದೆ.ಶ್ರೀ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯ ನದು ಸುವರ್ಣಕಾಲ.ಕವಿ,ವಿದ್ವಾಸಂಸರಿಗೆ ಅಪಾರ ಆಶ್ರಯ ನೀಡಿದ್ದ ಆತ ಸ್ವತಃ ತೆಲುಗು ,ಸಂಸ್ಕೃತ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾನೆ.ಆತ ರಚಿಸಿದ ' ಜಾಂಬವತೀ ಪರಿಣಯಂ' ಸಂಸ್ಕೃತ ನಾಟಕವು ಆತನ ಕವಿತಾಪ್ರತಿಭೆಯ,ಸಂಸ್ಕೃತ ಬಾಷಾ ಪಾಂಡಿತ್ಯದ,ಹರಿಬಕ್ತಿಯ ದ್ಯೋತಕವಾಗಿದೆ.ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯ ಮೈಲುಗಲ್ಲುಗಳಲ್ಲಿ ಈ ಕೃತಿಗೆ ಐತಿಹಾಸಿಕ ಮಹತ್ವವೂ ಇದೆ.

About the Author

ಬಿ.ಎನ್. ಸುಮಿತ್ರಾಬಾಯಿ

ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್‌. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ,  ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ.  ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ  ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...

READ MORE

Related Books