ಶೃಂಗೇರಿ ಉಪಚಾರ

Author : ಜಿ.ವಿ. ಗಣೇಶಯ್ಯ

Pages 156

₹ 80.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 08022161900

Synopsys

ಲೇಖಕ ಹಾಗೂ ವ್ಯಂಗ್ಯಚಿತ್ರ ಕಲಾವಿದ ಜಿ.ವಿ. ಗಣೇಶಯ್ಯ ಅವರ ನೆಗೆ ಬರಹಗಳಿರುವ ಕೃತಿ-ಶೃಂಗೇರಿ ಉಪಚಾರ. ನಗೆಗಳಲ್ಲಿ ವಿವಿಧ ಬಗೆ. ಬೇರೆ ಬೇರೆ ಅರ್ಥಗಳನ್ನು ಸ್ಫುರಿಸುತ್ತದೆ. ನಗು ಆರೋಗ್ಯಕ್ಕೆ ಪೂರಕವಾಗಿರಬೇಕು. ಹೇಗೆ ಮಗುವಿನ ತಿಳಿ ನಗೆ ವಂತೆ ಮನಸ್ಸಿಗೆ ಉಲ್ಲಾಸ-ಮುದ ನೀಡುತ್ದೋ ಹಾಗೆ ನಗೆ ಇರಬೇಕು ಎಂದು ಲೇಖಕರು ಆಶಿಸುತ್ತಾರೆ. ಕೆಲವೊಬ್ಬರ ನಗೆಗಳು ಇತರರ ಮನಸ್ಸನ್ನು ನೋಯಿಸುತ್ತದೆ ಎಂಬ ಬಗ್ಗೆ ಹಾಸ್ಯವಾಗಿಯೇ ವಿವರಿಸುತ್ತಾರೆ. ಇನ್ನು ಕೆಲವರಂತೂ ತುಟಿ ಬಿಗಿದುಕೊಂಡೇ ನಗುತ್ತಾರೆ. ಘನ ಗಂಭೀರ ವಾತಾವರಣವಿರಲಿ, ಅಲ್ಲೊಂದು ನಗೆ ಬಾಂಬು ಬಿದ್ದರೆ ಯಾವ ಅನಾಹುತವೂ ಆಗದೆ, ಆಗಿರುವ ಘೋರ ಅನಾಹುತ ತಿಳಿಯಾಗುತ್ತದೆ ಎನ್ನುತ್ತಾರೆ ಲೇಖಕರು. ಹಾಸ್ಯ ಅಪಹಾಸ್ಯ ಆಗಬಾರದು; ದ್ರೌಪದಿಯ ನಗೆಯಂತೆ ಕುರುಕ್ಷೇತ್ರವಾಗಬಾರದು. ನಗುವಿಗೂ-ನಗೆಪಾಟಲಿಗೂ ಅಜಗಜಾಂತರ ಇರಲಿ. ಇಲ್ಲವಾದರೆ ಕಾದಿದೆ ಗಂಡಾಂತರ! ಇಂತಹ ಸಂಗತಿಗಳನ್ನು ವಸ್ತುವಾಗಿಸಿಕೊಂಡ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.

About the Author

ಜಿ.ವಿ. ಗಣೇಶಯ್ಯ

ಲೇಖಕ, ವ್ಯಂಗ್ಯಚಿತ್ರಕಾರ  ಜಿ.ವಿ. ಗಣೇಶಯ್ಯ ಸದ್ಯ ಮೈಸೂರು ನಿವಾಸಿಗಳು. ಆದರೆ, ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮೀಪದ ಅಗಳಗಂಡಿ ಗ್ರಾಮದವರು. (ಜನನ: 1947ರಲ್ಲಿ)  ಹುಟ್ಟೂರಿನಲ್ಲಿ ಹತ್ತನೇ ತರಗತಿ ಮುಗಿಸಿದ ನಂತರ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರಕಲಾ ವ್ಯಾಸಂಗ ಹಾಗೂ ಸರ್ಕಾರಿ ಡಿಪ್ಲೊಮಾ ಪಡೆದರು. ಫೋಟೋಗ್ರಫಿ, ವ್ಯಂಗ್ಯ ಚಿತ್ರ ಕಲೆ,ಕರ್ನಾಟಕ ಸಂಗೀತ ಕಲಿತರು. ಮೈಸೂರಿನ ‘ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿ, 2007 ರಲ್ಲಿ ನಿವೃತ್ತರಾದರು. ವೈಚಾರಿಕ, ವೈಜ್ಞಾನಿಕ, ಆಧ್ಯಾತ್ಮ, ಯೋಗ,ಸಂಗೀತ, ಭಾಷೆ,  ಲಿಪಿ,ಚಿತ್ರಕಲೆ,ವ್ಯಕ್ತಿ ಚಿತ್ರ,ಪ್ರವಾಸ,ಚಾರಣ,ಯಕ್ಷಗಾನ- ಇತ್ಯಾದಿ  ವಿಚಾರಗಳಿಗೆ ಸಂಬಂಧಿಸಿ 300ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಇವರು ಉತ್ತಮ ಛಾಯಾಗ್ರಾಹಕರೂ ಹೌದು.  ಕೃತಿಗಳು:  ‘ಶಿಲ್ಪಿ ಸಿಂಗಣ್ಣಾಚಾರ್ಯ’, ...

READ MORE

Related Books