ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು

Author : ಶ್ರೀನಿವಾಸ ಜೋಕಟ್ಟೆ

Pages 440

₹ 380.00




Year of Publication: 2020
Published by: ಶ್ರೀರಾಮ ಪ್ರಕಾಶನ
Address: 893/ಡಿ, 3ನೇ ಕ್ರಾಸ್, ನೆಹರೂ ನಗರ, ಪೂರ್ವ ಬಡಾವಣೆ, ಮಂಡ್ಯ- 571401
Phone: 9448930173

Synopsys

‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’ ಈ ಕೃತಿಯಲ್ಲಿ ಶ್ರೀವಾಸ ಜೋಕಟ್ಟೆ ಅವರ 58 ಕತೆಗಳು ಸಂಕಲನಗೊಂಡಿವೆ. ಈ ಕೃತಿಗೆ ಲೇಖಕರಾದ ಜೋಗಿ, ಡಾ.ಬಿ.ಜನಾರ್ದನ ಭಟ್, ಅರವಿಂದ ಚೊಕ್ಕಾಡಿ, ಜಯರಾಮ ಕಾರಂತ, ಬಿ.ಎಂ.ಬಶೀರ್ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಅನಿಸಿಕೆಗಳು ಬೆನ್ನುಡಿ ಬರಹದಲ್ಲಿವೆ. ಕತೆಗಳ ಕುರಿತು ಬರೆಯುತ್ತಾ ‘ಮುಂಬಯಿಯ ನಿತ್ಯದ ಓಡಾಟಗಳ ನಡುವೆ ಧುತ್ತೆಂದು ಕಥೆಗಳು ಹುಟ್ಟಿಕೊಳ್ಳುವುದು, ಮಧುರ ಭಾವಗಳು ಅರಳುವುದು ಶ್ರೀನಿವಾಸ ಜೋಕಟ್ಟೆಯವರ ಕಥೆಗಳ ವೈಶಿಷ್ಟ್ಯ, ಹಾಗಾಗಿ ಅವರ ಕಥೆಗಳು ಬೋರು ಹೊಡೆಸುವುದೇ ಇಲ್ಲ. ಘಟನೆಗಳು, ಸಂಭಾಷಣೆಗಳು, ನಡುನಡುವೆ ಸುಳಿಯವ ಸೆಳೆಮಿಂಚಿನಂತಹ ಒಳತೋಟಿಗಳು ಕಥೆಗಳ ಆಕರ್ಷಣೆಗೆ ಕಾರಣವಾಗಿವೆ. ಸುಧೀರ್ಘ ವೈಚಾರಿಕ ಚರ್ಚೆಗಳು, ಸನ್ನಿವೇಶ ವರ್ಣನೆಗಳಲ್ಲಿ ಅವರ ಕಾಲವ್ಯಯ ಮಾಡುವುದಿಲ್ಲ’ ಎನ್ನುತ್ತಾರೆ ಡಾ.ಬಿ. ಜನಾರ್ಧನ ಭಟ್.

About the Author

ಶ್ರೀನಿವಾಸ ಜೋಕಟ್ಟೆ

ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್‌ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ.  ...

READ MORE

Related Books