ಶ್ರೀವಿಜಯನ ಕವಿರಾಜಮಾರ್ಗಂ

Author : ಆರ್‍ವಿಯಸ್ ಸುಂದರಂ

Pages 336

₹ 250.00




Year of Publication: 2017
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560069
Phone: 080-22107771

Synopsys

ಕವಿ ರಾಜಮಾರ್ಗಕ್ಕೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಕಾವ್ಯ ಶಾಸ್ತ್ರದ ಹಲವು ವಿಷಯಗಳ ಜೊತೆಗೆ ಆ ಕಾಲದ ಕನ್ನಡ ನಾಡು, ನುಡಿ, ಜನ ಮೊದಲಾದವುಗಳ ಬಗ್ಗೆ ಮಾಹಿತಿಗಳೂ ಇವೆ. ಕವಿರಾಜಮಾರ್ಗದಂತ ಶಾಸ್ತ್ರಗ್ರಂಥಗಳು ಪದಗಳ ಅನ್ವಯ, ಅರ್ಥ, ಗದ್ಯಾನುವಾದ ಮತ್ತು ವಿವರಣೆಯನ್ನು ಅಪೇಕ್ಷಿಸುತ್ತವೆ ಮತ್ತು ಅವುಗಳನ್ನೆಲ್ಲ ಒದಗಿಸುವುದು ಸಾಹಸವೇ ಸರಿ. ಬಹುಭಾಷಾ ವಿದ್ವಾಂಸರಾದ ಆರ್‍ವಿಯಸ್ ಸುಂದರಂ ರವರು ಹಲವು ಹಸ್ತಪ್ರತಿ, ಮುದ್ರಿತ ಆವೃತ್ತಿಗಳು, ಮೀಮಾಂಸ ಗ್ರಂಥಗಳನ್ನು ಗಂಭೀರವಾಗಿ ಮತ್ತು ಕೂಲಂಕಷವಾಗಿ ಪರಾಮರ್ಶಿಸಿದ್ದಾರೆ. ಮೂಲ ಕೃತಿಯ ಆಶಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ, ಯಾವುದೇ ವ್ಯಾಕರಣ ವ್ಯತ್ಯಾಸವಾಗದಂತೆ ಈ ಕೃತಿಯನ್ನು ರಚಿಸಿದ್ದಾರೆ.

About the Author

ಆರ್‍ವಿಯಸ್ ಸುಂದರಂ
(21 April 1948)

ರಾಳ್ಳಪಲ್ಲಿ ವೆಂಕಟ ಸುಬ್ಬು ಸುಂದರಂ ಅವರನ್ನು ’ಆರ್ವಿಯಸ್ ಸುಂದರಂ’ ಎಂದು ಗುರುತಿಸಲಾಗುತ್ತದೆ. ಕವಿ, ವಿದ್ವಾಂಸ, ವಿಮರ್ಶಕ, ಜಾನಪದ ತಜ್ಞ, ಕಾದಂಬರಿಕಾರ, ಅನುವಾದಕರಾಗಿ ಚಿರಪರಿಚಿತರು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಆರ್ವಿಯಸ್ ಸುಂದರಂ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅಧ್ಯಯನ ಕೇಂದ್ರ ಹಾಗೂ ಮೈ.ವಿ.ವಿ. ಪ್ರಸಾರಾಂಗದ ನಿರ್ದೇಶಕರೂ ಆಗಿದ್ದ ಸುಂದರಂ ಅವರು ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನವರು. 1948ರ ಏಪ್ರಿಲ್ 21ರಂದು ಜನಿಸಿದ ಅವರು ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣವನ್ನು ನೆಲ್ಲೂರಿನಲ್ಲಿ ಪಡೆದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1967) ಪದವಿ ಪಡೆದ ಅವರು ಅದೇ ವಿ.ವಿ.ಯಿಂದ ತೆಲುಗುನಲ್ಲಿ ...

READ MORE

Related Books