ಶೂದ್ರ ತಪಸ್ವಿ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 40

₹ 38.00




Year of Publication: 2012
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

ಈ ನಾಟಕವು ಶಂಬೂಕ ತಪಸ್ವಿಯ ಕಥಾನಕವನ್ನು ವಿವರಿಸುತ್ತದೆ. 1944ರಲ್ಲಿ ಮೊದಲ ಮುದ್ರಣ ಕಂಡಂತಹ ಈ ಪುಸ್ತಕವು ರಾಮಾಯಣದ ಕಥಾಹಂದರದಲ್ಲಿ ಗುರುತಿಸಿಕೊಳ್ಳುತ್ತದೆ. ಕುವೆಂಪು ಅವರು ಬರೆದಂತಹ ನಾಟಕಗಳಲ್ಲಿ ಈ ನಾಟಕವು ಬಹಳಷ್ಟು ಟೀಕೆಗಳಿಗೆ ಒಳಗಾದ ಕಾರಣ, ನಾಟಕದ ಮುಂದಿನ ಮುದ್ರಣದಲ್ಲಿ ಅಂದರೆ 1947ರಲ್ಲಿ ಕುವೆಂಪು ಅವರು ಮಾರ್ನುಡಿಯನ್ನು ಬರೆಯಬೇಕಾಯಿತು. ವೃದ್ಧ ಬ್ರಾಹ್ಮಣನೊಬ್ಬ ರಾಮನ ಅರಮನೆಯ ಎದುರು ತನ್ನ ಮಗನ ಕಳೇಬರವನ್ನು ತಂದು ಈ ಸಾವಿಗೆ ನೀನೇ ಕಾರಣ ಎಂದು ಹೇಳಿದಾಗ, ಚಿಂತಾಕ್ರಾಂತನಾದ ರಾಮನು, ಮಂತ್ರಿ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತಾನೆ. ಶೂದ್ರನೊಬ್ಬ ತಪಸ್ಸಿಗೆ ಕುಳಿತ ಕಾರಣ, ವಟುವಿನ ಮಗನ ಹತ್ಯೆಯಾಯಿತು ಎಂದು ನಾರದ ಎಂಬುವವನು ರಾಮನಿಗೆ ಹೇಳುತ್ತಾನೆ. ಶೂದ್ರ ತಪಸ್ವಿಯನ್ನು ಸಂಹರಿಸಿ ಬ್ರಾಹ್ಮಣನ ಮಗುವಿನ ಜೀವವನ್ನು ಮತ್ತೆ ಮರಳಿ ಪಡೆಯುವವರೆಗಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿ ಸಾಗುತ್ತದೆ. ಮೃತ್ಯು, ಭೈರವ ಮತ್ತು ರಾಮನ ನಡುವಿನ ಸಂಭಾಷಣೆಯೂ ಕೂಡ ಈ ನಾಟಕದ ಆಕರ್ಷಣೀಯ ಭಾಗ. ಶೂದ್ರ ತಪಸ್ವಿ ನಾಟಕವು ಮೂರು ದೃಶ್ಯಗಳನ್ನು ಓಳಗೊಂಡಿದೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books