ಶೂನ್ಯವಾದ ಮತ್ತು ಮಾಯಾವಾದ

Author : ಉದಯ್ ಕುಮಾರ್ ಹಬ್ಬು

Pages 136

₹ 100.00




Year of Publication: 2016
Published by: ವಿಜಯಲಕ್ಷ್ಮಿ ಪ್ರಕಾಶನ
Address: #657, ಕೂಗುಬಂಡೆ ರಸ್ತೆ, ಇ ಮತ್ತು ಎಫ್‌ ಬ್ಲಾಕ್‌, ಕುವೆಂಪುನಗರ, ಮೈಸೂರು
Phone: 9448350932

Synopsys

ಬೌದ್ಧ ಧರ್ಮದ ಶೂನ್ಯವಾದ ಮತ್ತು ಶಂಕರಚಾರ್ಯರ ಅದ್ವೈತದ ಮಾಯಾವಾದಗಳ ತೌಲನಿಕ ಅಧ್ಯಯನವನ್ನು ಉದಯಕುಮಾರ ಹಬ್ಬು ಮಾಡಿದ್ದಾರೆ. ಗ್ರಂಥದಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ನಾಗಾರ್ಜುನನ ’ಮಧ್ಯಮಕ ಕಾರಿಕಾ’- ಒಂದು ಅನುಸಂಧಾನ, ಪಟಿಚ್ಚ ಸಮುತ್ಪಾದ (ಅವಲಂಬಿತ ಹುಟ್ಟು), ಚಿತ್ತಮಾತ್ರ ತತ್ವಶಾಸ್ತ್ರ, ಮಾಯಾವಾದ ಸಿದ್ಧಾಂತ, ಶಂಕರ ಮತ್ತು ಬೌದ್ಧಧರ್ಮದ ಸಂಬಂಧಗಳು, ಅವಲಂಬಿತ ಉದಯ ಅಥವಾ ಹುಟ್ಟು, ಮೂಲ ಸ್ವಭಾವದ ಶೂನ್ಯತೆ ಮತ್ತು ನಮ್ಮ ಬದುಕು, ವಿಪಲ್ಲಾಸಗಳು.

ಪುಸ್ತಕವನ್ನು ಕುರಿತು ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿಯಲ್ಲಿ ’ಬೌದ್ಧ ತಾರ್ಕಿಕನಾದ ನಾಗಾರ್ಜುನನ ನೆವದಲ್ಲಿ ಬೌದ್ಧಸಾಹಿತ್ಯ ಮತ್ತು ಅದ್ವೈತದ ಮಾಯಾಸಿದ್ಧಾಂತದ ಕುರಿತು ತೌಲನಿಕವಾಗಿ ಚಿಂತಿಸಿದ್ದಾರೆ. ಈ ಪುಸ್ತಕದ ಮುಖ್ಯವಿವೇಚನೆ ಬುದ್ಧನು ಹೇಳಿದ ಅಷ್ಟಾಂಗ ಮಾರ್ಗ ಮತ್ತು ನಾಲ್ಕು ಆರ್ಯಸತ್ಯಗಳನ್ನು ವಿವೇಚಿಸುವುದು, ವಿವರಿಸುವುದೂ ಆಗಿದೆ. ಶಂಕರರು ಜೀವ-ಜಗತ್ತು ಮತ್ತು ಈಶ್ವರ ತತ್ವಗಳ ಮೂಲಕ ಜಗತ್ ಮಿಥ್ಯಾ ತತ್ವವನ್ನು ಬ್ರಹ್ಮಸತ್ಯವನ್ನೂ ಸಾರುವ ವಿಚಾರಗಳನ್ನು ಕೊಟ್ಟು ಹಬ್ಬು ವಿವೇಚಿಸಿದ್ದಾರೆ. ಜಗತ್ ಮಿಥ್ಯವನ್ನು ಅತ್ತ ಬುದ್ಧ ಮತ್ತು ಇತ್ತ ಶಂಕರರು ಗೌಣವಾಗಿಸುತ್ತಾರೆ. ಆದರೆ, ಶಂಕರರು ಅದನ್ನು ಸ್ವಾನುಭವದ ಐಕ್ಯದಲ್ಲಿ ನೆಲೆ ನಿಲ್ಲಿಸುತ್ತಾರೆ. ಈ ವಿಚಾರಗಳನ್ನು ವಿಸ್ತಾರವಾಗಿಯೂ ತಕ್ಕಷ್ಟು ತಾತ್ವಿಕ ಪರಿಕರಗಳ ಮೂಲಕ ನಿರೂಪಿಸಲಾಗಿದೆ’.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books