ಸಿದ್ದಲಿಂಗಯ್ಯ ತುಳಿಕ್ಕೊಳಗಾದವರ ಆತ್ಮಸ್ಥೈರ್ಯದ ದನಿ

Author : ರಮೇಶ ಎಸ್.ಕತ್ತಿ

₹ 200.00




Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ- 586202, ಆಲಮೇಲ ತಾಲೂಕು, ವಿಜಯನಗರ ಜಿಲ್ಲೆ
Phone: 7795341335

Synopsys

ಲೇಖಕ ರಮೇಶ ಎಸ್. ಕತ್ತಿ ಹಾಗೂ ರಾಜಕುಮಾರ ಬಡಿಗೇರ ಸಂಪಾದಕತ್ವದ ’ ಸಿದ್ದಲಿಂಗಯ್ಯ ತುಳಿತಕ್ಕೊಳಗಾದವರ ಆತ್ಮಸ್ಥೈರ್ಯದ ದನಿ’ ಕೃತಿಯು ಸಿದ್ದಲಿಂಗಯ್ಯ ಅವರ ಜೀವನ ಚಿತ್ರಣ ನೀಡುತ್ತದೆ. ಕೃತಿಗೆ ಬೆನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು, ಸಿದ್ದಲಿಂಗಯ್ಯನವರಲ್ಲಿ ಪ್ರಖರವಾದ ಚಿಂತನೆ ಧೈರ್ಯ, ಪದವಿ ಓದುತ್ತಿರುವಾಗಲೇ ಇತ್ತು. ’ಸಾಹಿತ್ಯ ಕ್ಷೇತ್ರದ ಒಳಗಡೆ ಹೊಲೆಮಾದಿಗರ ಹಾಡು’ ಅವರ ಶೀರ್ಷಿಕೆ ಎಲ್ಲೆಡೆಯೂ ಸಂಚಲನವನ್ನು ಉಂಟುಮಾಡಿತ್ತು. ಆ ಕಾಲದಲ್ಲಿ, ಅನೇಕ ಹೋರಾಟದ ಹಾದಿಗಳಿಗೆ ಈ ಕೃತಿ ಸ್ಫೂರ್ತಿ ನೀಡಿತು. ಅಲ್ಲದೆ, ಇವರ ಮುಂದಿನ ಕೃತಿಗಳು ಸಾಹಿತ್ಯ ವಲಯದಲ್ಲಿಯೂ ವಿಮರ್ಶಕರ ಮೆಚ್ಚುಗೆ ಪಡೆಯುತ್ತ ಬಂದವು. ಪ್ರಖರ ಮಾತಿನೊಂದಿಗೆ ವಿಡಂಬನಾ ಪ್ರಜ್ಞೆ ಅವರಲ್ಲಿ ಸದಾ ಜಾಗೃತವಾಗಿರುತ್ತಿತ್ತು. ಊರುಕೇರಿ, ಅವತಾರಗಳು, ಇದನ್ನು ಓದಿದರೆ ಅವರ ವಿಡಂಬನೆ ಶಕ್ತಿ ಚೆನ್ನಾಗಿ ಅರ್ಥವಾಗುತ್ತದೆ. ಒಟ್ಟಾರೆಯಾಗಿ, ಕಟ್ಟುವ ಕ್ರಿಯೆ ಅವರ ಒಳನೋಟಗಳಲ್ಲಿ ಇತ್ತು. ಇಂದಿಗೂ ಅವರು ನನ್ನ ಮನಸ್ಸಿನಲ್ಲಿ ಉಳಿದಿರುವುದು ತಮ್ಮ ಪ್ರಖರ ಚಿಂತನೆಗಳಿಂದ’ ಎಂದು ಪ್ರಶಂಸಿಸಿದ್ದಾರೆ. 

 

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books