ಸಿದ್ಧಪ್ರಭು ತತ್ವಪದಗಳು

Author : ಎಸ್. ನಟರಾಜ ಬೂದಾಳು

Pages 304

₹ 58.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಲೇಖಕ ಎಚ್. ಕಾಶೀನಾಥ ರೆಡ್ಡಿ ಅವರು ಸಂಪಾದಿತ ಕೃತಿ-ಸಿದ್ಧಪ್ರಭು ತತ್ವಪದಗಳು ಸಿದ್ಧಪ್ರಭುಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನವರು. ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ. ತನು-ಮನ-ಧನ ಮಹಾಬೇಲಿಯ ತೊಟ್ಟು, ತಂದಿತಾಯಿ ಒಂದು ಬಳ್ಳೊಳ್ಳಿ ಕೊಟ್ಟರೆ, ಜಾಣ ಗುಣದವನೆ ಭಕ್ತ, ಕೇಳಬಾರದು ಕಿವಿ ಕೇಳಬಾರದು, ಏನ ಬೇಕೋ ಯೋಗಿಗಿ ಏನ ಬ್ಯಾಡೋ, ಜಲ್ಮಕ ಬಾರದ ಕಾರ್ಯ ಮಾಡು, ಬರ್‍ರಿ ಮಿತ್ರ ಹೋಗನು ಬಸವ ಕಲ್ಯಾಣ, ದಾಸಿಯಾಗದು ಸಮ್ಮನಿಲ್ಲ,ಸಂತ ಯಾತಕ ಪಂಡಿತ ನಾನೆಂಬೊ, ಆತ್ಮದ ಅನುಭಾವ ಅರ್ಥವ ಹೇಳಲಿಕ್ಕೆ, ಕುಸ್ತಿ ಆಡುವನೆ ಜಾಮರ್ಧ, ಸರ್ವರಿಗಿ ಏನಂತಿ ನೀತಿ ನಡಿರಿ ಸ್ವಧರ್ಮ, ಮಿತ್ರ ನೋಡೋ ಇದು ಯಾತರ ಗಿಡವು, ನಿಧಿಯೊಳು ಭದ್ರನಾಥ ತಿಳಕೊ ಹೀಗೆ ಸಿದ್ಧಪ್ರಭುಗಳ ತತ್ವಪದಗಳನ್ನು ಸಂಪಾದಿಸಲಾಗಿದೆ. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮುಖ್ಯಸ್ಥ ಹಾಗೂ ಸಾಹಿತಿ ಎಸ್. ನಟರಾಜ ಬೂದಾಳು ಕೃತಿಯ ಪ್ರಮುಖ ಸಂಪಾದಕರು.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books