ಸಿರಿಸಂಪಿಗೆ

Author : ಚಂದ್ರಶೇಖರ ಕಂಬಾರ

Pages 80

₹ 50.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾಗಿರುವ ಈ ನಾಟಕದ ವಸ್ತುವನ್ನು ಚಂದ್ರಶೇಖರ ಕಂಬಾರ ಅವರಿಗೆ ಹೇಳಿದ್ದು ಎ.ಕೆ. ರಾಮಾನುಜನ್ ಅವರು. ಇದೇ ಕಥೆಯನ್ನು ಆಧರಿಸಿ ಗಿರೀಶ್ ಕಾರ್ನಾಡ್ ಅವರು ’ನಾಗಮಂಡಲ’ ಎಂಬ ನಾಟಕವನ್ನು ರಚಿಸಿದ್ದಾರೆ. ಕಂಬಾರರ 'ಸಿರಿಸಂಪಿಗೆ' ನಾಟಕವು ಒಂದು ಜನಪದ ಕಥೆಯಿಂದ ಪ್ರೇರಿತವಾಗಿದೆ. ದೇಹ ಮತ್ತು ಆತ್ಮ -ಮನಸ್ಸುಗಳು ಎರಡಾಗಿ ಸೀಳುವುದು ಕೇವಲ ಪೂರ್ಣತೆಯನ್ನು ನಾಶ ಮಾಡವುದಿಲ್ಲ. ಬದಲಿಗೆ ಬೇರ್ಪಟ್ಟೆ ಮೇಲೆ ಅವೆರಡು ಕೊಳೆಯುತ್ತವೆ ಎನ್ನುವ ತಾತ್ವಿಕತೆಯ ತಳಹದಿಯ ಮೇಲೆ ಈ ನಾಟಕ ರಚಿತವಾಗಿದೆ.

ಸ್ವರಭಂಗವಾದೊಡನೆ ಶಿವನಾಗದೇವನ  ಮದುವೆ ಮಾಡಬೇಕು. ನೀರಿನಲ್ಲಿ ನೆರಳು ನೋಡದಂತೆ ತಡೆಯಬೇಕು. ಇಲ್ಲವಾದರೆ ಅವನು ಸನ್ಯಾಸಿಯಾಗುತ್ತಾನೆ ಎಂದು ಕುಲದೇವ ಭವಿಷ್ಯ ಹೇಳುತ್ತಾನೆ. ಮದುವೆಗೆ  ತಾಯಿ ಒತ್ತಾಯಿಸಿದಾಗ ಶಿವನಾಗದೇವ ಕೊರತೆಯಿಲ್ಲದ ಹೆಣ್ಣನ್ನು ವರಿಸುವುದಾಗಿ ಹೇಳುತ್ತಾನೆ. ದೀಪದ ಮೊಲ್ಲೆ ಎಂಬ ಚೆಲುವೆಯನ್ನು ಕನಸಿನಲ್ಲಿ ಕಾಣುತ್ತಾನೆ. ತನ್ನಲ್ಲಿ ಅಡಗಿರುವ ಚೆಲುವೆಯನ್ನು ಹೊರತೆಗೆಯಲು ಶಿವನಾಗದೇವ ತನ್ನನ್ನು ತಾನೇ ಸೀಳಿಕೊಳ್ಳುತ್ತಾನೆ. ಒಂದು ಭಾಗದಿಂದ ಶಿವನಾಗ ಹೊರಬಂದರೆ ಮತ್ತೊಂದರಿಂದ ಕಾಳಿಂಗ ಸರ್ಪ ಬಂದು ಕಾಡು ಸೇರುತ್ತದೆ. ತಾಯಿಯ ಒತ್ತಾಯಕ್ಕೆ ಮಣಿದು ನಾಗದೇವ ಸಿರಿಸಂಪಿಗೆಯನ್ನು ಮದುವೆಯಾಗುತ್ತಾನೆ. ಆದರೆ ಅವಳಿಗೆ ದಾಂಪತ್ಯ ಸುಖ ನೀಡಲು ಆಗುವುದಿಲ್ಲ. ಕಾಡಿಗೆ ಹೋದ ಕಾಳಿಂಗ ಆಕರ್ಷಣೆಗೆ ಒಳಗಾಗಿ ಸಿರಿಸಂಪಿಗೆಯೊಂದಿಗೆ ದೇಹ ಸಂಪರ್ಕ ಬೆಳೆಸುವುದರಿಂದ ಅವಳು ಗರ್ಭ ಧರಿಸುತ್ತಾಳೆ. ಸಿರಿಸಂಪಿಗೆ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ, ಶಿವನಾಗದೇವ ಸಂಶಯ ತಾಳಿ ನಾಗದಿವ್ಯ ಮಾಡುವಂತೆ ಕೇಳುತ್ತಾನೆ.

ನಾಗದಿವ್ಯ ಮಾಡುವ ಸಿರಿಸಂಪಿಗೆ, ಕಾಳಿಂಗನ ಸಹಾಯದಿಂದಲೇ ತಾನು ಪರಿಶುದ್ಧಳು ಎಂದು ಸಾಬೀತು ಮಾಡುತ್ತಾಳೆ. ಕಾಳಿಂಗ ಶಿವನಾಗದೇವರ ಮಧ್ಯೆ ಯುದ್ಧ ನಡೆದು ಕಾಳಿಂಗ ಸಾಯುತ್ತಾನೆ. ಅವನ ಸಾವಿನಿಂದ ಶಿವನಾಗದೇವನ ಬೆನ್ನುಹುರಿ ಸಡಿಲವಾಗುತ್ತದೆ. ಶಿವನಾಗದೇವ ತಾಯಿಯ ಕರೆದು ಸಿರಿಸಂಪಿಗೆ ಯಾವ ತಪ್ಪು ಮಾಡಿಲ್ಲ ಎಂದು ಹೇಳುತ್ತಾನೆ. ಸಿರಿಸಂಪಿಗೆಗೆ ತಮ್ಮ ಮಗ ಸೀಳಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಸಾಯುತ್ತಾನೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Awards & Recognitions

Related Books