ಶ್ಮಶಾನ ಕುರುಕ್ಷೇತ್ರಂ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 46

₹ 55.00




Year of Publication: 2016
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

ಮಹಾಭಾರತದ ಕಥಾ ವಸ್ತುವನ್ನು ಆಧಾರಿಸಿ ಬರೆದಂತಹ ನಾಟಕ ಶ್ಮಶಾನ ಕುರುಕ್ಷೇತ್ರಂ. ಈ ನಾಟಕದಲ್ಲಿ 10 ದೃಷ್ಯಗಳಿದ್ದು ಇವು ಯುದ್ಧದ ಭಿಕರತೆಯನ್ನು ಓದುಗರಿಗೆ ತಿಳಿಯಪಡಿಸುತ್ತವೆ. 1931ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ, ಇಲ್ಲಿಯವರೆಗೆ ಆರಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿದೆ. ಕುವೆಂಪು ಅವರು ಈ ಪುಸ್ತಕದಲ್ಲಿ ಯುದ್ಧದಿಂದಾಗುವ ಪರಿಣಾಮಗಳ ಕುರಿತು ವಿವರಿಸಿದ್ದಾರೆ. ಕೃಷ್ಣ, ಪಾಂಡವರು, ಕೌರವರು ಮತ್ತು ಅವರ ಸುತ್ತಮುತ್ತಲಿನವರ ನಡುವೆ ನಡೆಯುವಂತಹ ಸನ್ನಿವೇಷಗಳನ್ನು ವಿವರಿಸಿ, ಕುರುಕ್ಷೇತ್ರ ಯುದ್ಧದಲ್ಲಿ ಈ ಪಾತ್ರಗಳು ಯಾವ ರೀತಿ ಪಾತ್ರ ವಹಿಸುತ್ತವೆ ಮತ್ತು ಯುದ್ದದ ನಂತರ ಆ ಪಾತ್ರಗಳು ಅನುಭವಿಸುವ ವೇದನೆಯನ್ನು ಈ ನಾಟಕ ವಿವರಿಸುತ್ತದೆ. ಯುದ್ದದಲ್ಲಿ ನಡೆಯುವ ಕ್ರೌರ್ಯ, ಅನ್ಯಾಯ, ವಿನಾಶ, ಅವಿವೇಕ, ವಿಧಿ, ವಿಫಲತೆ, ಹತಾಶೆ, ಸಾವು ನೋವುಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಕುವೆಂಪು ಅವರು ವಿವರಿಸಿದ್ದಾರೆ. ಯುದ್ದದ ನಂತರ ಅನ್ಯಾಯವೆಲ್ಲಾ ತೊಲಗಿ ನ್ಯಾಯದ ಪ್ರತಿಷ್ಟಾಪನೆಯಾಗುತ್ತದೆಂದು ಭಾವಿಸುತ್ತೇವೆ ಆದರೆ ಅಲ್ಲಿ ಮತ್ತೆ ಸಾಮಾನ್ಯರ ಆಹುತಿ ಪ್ರಾರಂಭವಾಗುತ್ತದೆಯೆಂಬ ಮಾರ್ಮಿಕವಾದ ಸಂದೇಶವನ್ನು ಕುವೆಂಪು ಅವರು ಈ ನಾಟಕದ ಮೂಲಕ ಸಾರಿದ್ದಾರೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books