ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ

Author : ರಾಜಾರಾಮ ಹೆಗಡೆ

Pages 620

₹ 440.00




Year of Publication: 2018
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ, ಬಿ-ಮುಖ್ಯರಸ್ತೆ, ಕಾಸ್ಮೊ ಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 0802244 3996

Synopsys

ಖ್ಯಾತ ಲೇಖಕ ಡಾ. ರಾಜಾರಾಮ ಹೆಗಡೆ ಅವರ ವಿಮರ್ಶಾತ್ಮಕವಾಗಿ ಅನುವಾದಿತ ಬರಹಗಳ ಕೃತಿ-ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ. ಹಿರಿಯ ಲೇಖಕ ಎಸ್.ಎನ್. ಬಾಲಗಂಗಾಧರ ಅವರು ಇಂಗ್ಲಿಷಿನಲ್ಲಿ ರಚಿಸಿದ (The Hieathen in his Blindness: ...Asia  the West and the Dynamics of Religion) ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು.

ಕೆಲವು ಒಗಟುಗಳು ಮತ್ತು ಸಮಸ್ಯೆಗಳು (ಕೆಲವು ಅಥ್ವಾಗದ ಮನೋಭಾವಗಳು, ರಹಸ್ಯಗಳು ಮತ್ತು ರಹಸ್ಯಗಳ ಸೃಷ್ಟಿ), ಕೇವಲ ಒಂದೇ ಮಾರ್ಗದಂದ ಸಾಧ್ಯವಿಲ್ಲ (ಪೇಗನ್ನರ ರೋಮಿನ ಕಲ್ಲುಹಾಸಿಗೆಗಳ ಓಣಿಗಳ ಕುರಿತು, ರೊಮನ್ನರು ಮತ್ತು ಅವರ ರಿಲಿಜಿಯೋ, ಮಾರ್ಗ ಮಧ್ಯೆದಲ್ಲಿ ದೇವನಗರಕ್ಕೆ, ನಿಜವಾದ ಪೇಗನ್ನರು ಎದ್ದು ನಿಲ್ಲುತ್ತೀರಾ?, ಸೇಂಟ್ ಆಗಸ್ಟೈನ್ ನಿಂದ ಕಾಲ್ವಿನ್ ಮತ್ತು ಅವರಾಚೆಗೆ), ಬ್ಯಾಬಿಲೋನಿನ ವೇಶ್ಯೆ ಮತ್ತು ಇತರೆ ದೇವವಾಣಿಗಳು (ಒಂದು ಆಧುನಿಕ ಛಾಯಾಚಿತ್ರದ ಆಲ್ಬಂ, ಲೈಂಗಿಕ ಸ್ವಾತಂತ್ಯ್ರದಲ್ಲಿ ಆಧುನಿಕತೆ ಏನಿದೆ? ಇತ್ಯಾದಿ), ಎಲ್ಲ ದಾರಿಗಳು ರೋಮಿಗೆ ಕರೆದೊಯ್ಯುತ್ತವೆ  (ನಾಲ್ಕು ಸೂಚ್ಯಂಶಗಳು, (ವೈಚಾರಿಕತೆಯ ಯುಗದ ಹೊಸ್ತಿಲಲ್ಲಿ, ಪ್ಯಾರೀಸಿಗೂ ಜೆರುಸೆಲೇಮಿಗೂ ಏನು ಸಂಬಂಧ?, ಸೀನ್ ನದಿಯ ದಡದ ಮೇಲೆ ಇತ್ಯಾದಿ), ಪ್ಯಾರೀಸ್, ಲಂಡನ್ ಮತ್ತು ಹೈಡಲ್ ಬರ್ಗ್ ಗಳಲ್ಲಿ (ಇವ್ಯಾಂಜಲಿಕಲ್ ಸಂದಿಗ್ಧಗಳು, ಪರಿಕಲ್ಪನಾತ್ಮಕ ಸಂದಿಗ್ಧತೆ, ಸಾಮಾಜಿಕ ಸಂದಿಗ್ಧತೆ ಇತ್ಯಾದಿ), ಒಂದು ವಿವಾದ ವಿಷಯಕ್ಕೆ ಚರಮಗೀತೆ (ಒಂದು ವಿಧಾನ ಶಾಸ್ತ್ರೀಯ ಪರಿಗಣನೆ, ಆತಕ, ನಿಸರ್ಗ ಮತ್ತು ಮಾನವ, ಮನೋವೈಜ್ಞಾನಿಕ ಊಹೆಗಳು ಇತ್ಯಾದಿ) ಕವಲುಗಳು ಎಂದಾದರೂ ಕೂಡುವವೆ? (ಒಂದು ಹೊಸ ಬೆಳವಣಿಗೆ ಮತ್ತು ಒಂದು ಹೊಸ ಕಾಳಜಿಗಳು, ಕಾಳಜಿಗಳ ವಿಂಗಡಣೆ , ಕ್ರಿಶ್ಚಿಯಾನಿಟಿಯ ಮೇಲೆ ಪೇಗನ್ ಒಂದು ಮೊಕದ್ದಮೆ, ನನ್ನ ಆರೋಪ ಇತ್ಯಾದಿ), ಮಹನೀಯರೆ, ಮಹಿಳೆಯರೆ, ಆರೋಪಿಯು ಅಪರಾಧಿಯೇ (ಫಿರ್ಯಾದುದಾರರನ ಮೊಕದ್ದಮೆ, ಸೋನದಂಡ ನನಗೆ ಹೇಳು, ನಿಜವಾದ ಬ್ರಾಹ್ಮಣನ್ಯಾರು ?, ಯಾರು ರಿಲಿಜಿಯಸ್, ಪ್ರಿಯ ಓದುಗರೆ ಯಾರು ಸೆಕ್ಯುಲರ್, ಒಂದು ವಾದದ ಒಂದರ್ಧದ ಕುರಿತು ಇತ್ಯಾದಿ), ಮಾನವ ದುರಂತ ಮತ್ತು ದೈವೀ ಪ್ರತೀಕಾರ (ಏಕೆಂದರೆ, ಈ ಕಥೆಯು ಮುಂದುವರಿಯಲೇ ಬೇಕು, ವಿವಾದವು ಯಾರದರ ಕುರಿತು, ಬಗೆಹರಿಸಲಾಗದ ವಿವಾದಗಳು, ಚರ್ಚಾಂಶಗಳ ಗೊಂದಲ ಇತ್ಯಾದಿ), ಮಾರ್ಗ ಬದಲಾವಣೆ (ರಿಲಿಜಿಯನ್ ಎಂದರೆ, ಭಾಷಿಕ ನಿರ್ಬಂಧಗಳ ವಿವರ, ಅಪಾರ್ಥಗಳು ಮತ್ತು ಪ್ರಲೋಭನೆಗಳು ಇತ್ಯಾದಿ), ಅರಸುವವರೇ ಧನ್ಯರು (ಅಸಹಿಷ್ಣುತೆಯ ಜ್ಞಾನ ಮೀಮಾಂಸೆ, ರಿಲಿಜನ್ನು ಮತ್ತು ಡಾಕ್ಟ್ರಿನ್ನು, ಸ್ವರ್ಗ ಲೋಕದಲ್ಲಿರುವ ನಮ್ಮ ತಂದೆ, ಹುಡುಕು ನಿನಗೆ ಸಿಗುತ್ತದೆ, ಅವನಿಗೆ ಭೂಮಿಯ ಮೇಲೆ ಫೇತ್ ಸಿಗುತ್ತದೆಯೇ, ನಿನ್ನ ಹೆಸರು ಪಾವನವಾಗಲಿ ಇತ್ಯಾದಿ), ರಿಲಿಜನ್ನು ಇಲ್ಲವೆಂಬುದನ್ನು ಕಲ್ಪಿಸಿಕೊಳ್ಳಿ (ವಿಶ್ವಾವಲೋಕನವೆಂಬ ನಿರ್ದಿಷ್ಟವಾದ ವಿಚಾರ ಕುರಿತು, ರಿಲಿಜನ್ನು ಮತ್ತು ವಿಶ್ವಾವಲೋಕನ, ಅವಲೋಕನವಿಲ್ಲದ ವಿಶ್ವ ಇತ್ಯಾದಿ), ಸಂಸ್ಕೃತಿಗಳ ತುಲನಾತ್ಮಕ ವಿಜ್ಞಾನಕ್ಕೆ ಪ್ರಸ್ತಾವನೆಗಳು (ಕಲಿಕೆಯ ಸಂಯೋಜನೆಗಳಾಗಿ  ಸಂಸ್ಕೃತಿಗಳು, ಕಲಿಕೆಯ ಪ್ರಕ್ರಿಯೆ ಮತ್ತು ಸಾಂಸ್ಕೃತಿಕ ಭಿನ್ನತೆಗಳು, ಒಂದು ವಿಭಿನ್ನ ರೀತಿಯ ತಿಳಿವಳಿಕೆ, ಒಂದು ಮುಗ್ಧ ಪ್ರಶ್ನೆ, ರಿಲಿಜನ್ನಿನ ಕ್ರಿಯಾಶೀಲತೆ ಇತ್ಯಾದಿ), ಪ್ರಯಾಣದ ಅಂತ್ಯದಲ್ಲಿ (ವಿಭಿನ್ನ ವಿಶ್ರಾಂತಿ ಗೃಹಗಳು, ಪ್ರಸ್ತುತವಾದದ ಕುರಿತು, ಜ್ಞಾನಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇತ್ಯಾದಿ) ಹೀಗೆ ಪ್ರಮುಖ ಶೀರ್ಷಿಕೆಗಳಡಿ ವಿವಿಧ ಉಪ ಶೀರ್ಷಿಕೆಗಳನ್ನಾಗಿಸಿ ಪರಿಕಲ್ಪನೆಗಳನ್ನು ವಿವರಿಸಿ, ಚರ್ಚಿಸಿ, ವಿಮರ್ಶಿಸಿದ ಬರಹಗಳು ಸಂಕಲನಗೊಂಡಿವೆ.

 

About the Author

ರಾಜಾರಾಮ ಹೆಗಡೆ

ಡಾ. ರಾಜಾರಾಮ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈನವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೊನ್ನೆಬಾಗ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ.  ಪ್ರಾಕ್ತನಶಾಸ್ತ್ರ ಹಾಗೂ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಶೇಷ ಅಧ್ಯಯನವನ್ನಾಗಿ ಆಯ್ಕೆಮಾಡಿಕೊಂಡು ತಮ್ಮ ಸ್ನಾತಕೋತ್ತರ ಪದವಿಯನ್ನು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1979ರಲ್ಲಿ ‘ಶುಂಗ ಕಾಲದ ಕಲೆ : ಸಾಂಸ್ಕರತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಹಂಪಿ, ಇನಾಂಗಾವ್ ಹಾಗೂ ಸನ್ನತಿ ನೆಲೆಗಳ ಉತ್ಖನನದಲ್ಲಿ ಭಾಗವಹಿಸಿದ್ದಾರೆ. 1988ರಿಂದ 2019ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ...

READ MORE

Related Books