ಸೌಹಾರ್ದ ಸೆಲೆ

Author : ಎ.ಕೆ. ಸುಬ್ಬಯ್ಯ

Pages 316

₹ 200.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ಎ.ಕೆ. ಸುಬ್ಬಯ್ಯ ಅವರದು ಪ್ರಭುತ್ವ ವಿರೋಧಿ ನಿಲುವು. ರಾಜಕೀಯದ ಆರಂಭದ ದಿನಗಳಲ್ಲಿ ಬಲಪಂಥೀಯ ವಿಚಾರ ಧಾರೆಯ ಜೊತೆಗೆ ಗುರುತಿಸಿಕೊಂಡಿದ್ದ ಸುಬ್ಬಯ್ಯನವರು ನಂತರ ಅಲ್ಲಿಂದ ಹೊರಬಂದು ’ಸೆಕ್ಯುಲರ್‌’ ವಿಚಾರ ವಾಹಿನಿಗೆ ಸೇರಿದವರು. ಈ ಗ್ರಂಥದಲ್ಲಿ ಸುಬ್ಬಯ್ಯನವರು ಸೌಹಾರ್ದ ಕುರಿತು ಬರೆದ ಲೇಖನಗಳನ್ನು ಒಳಗೊಂಡಿದೆ. ಆರ್‌.ಎಸ್‌.ಎಸ್‌. ಅಂತರಂಗ ಬರೆದಿರುವ ಸುಬ್ಬಯ್ಯನವರು ಈ ಗ್ರಂಥದಲ್ಲಿನ ಬರೆಹ ಸೌಹಾರ್ದವನ್ನು ಕೇಂದ್ರವಾಗಿಟ್ಟುಕೊಂಡವುಗಳು.

About the Author

ಎ.ಕೆ. ಸುಬ್ಬಯ್ಯ
(08 August 1936 - 27 August 2019)

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದ ಎ.ಕೆ. ಸುಬ್ಬಯ್ಯ ಕೊಡಗು ಜಿಲ್ಲೆಯವರು. ತಮ್ಮ ಪ್ರಖರವಾದ ಮಾತುಗಳಿಂದ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿ‌ದ್ದ ಸುಬ್ಬಯ್ಯ ಅವರು ಸದಾ ಆಡಳಿತ ಪಕ್ಷದ ವಿರೋಧಿಯಾಗಿಯೇ ಇದ್ದವರು. ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿರುವ ಸುಬ್ಬಯ್ಯ ಅವರು ಸದ್ಯ ಸೌಹಾರ್ದ-ಸಹಬಾಳ್ವೆಯ ಪರವಾಗಿದ್ದಾರೆ. ಸುಬ್ಬಯ್ಯ ಅವರು ಆರ್‌.ಎಸ್‌.ಎಸ್‌. ಅಂತರಂಗ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books