ಶ್ರೀಸಾಮಾನ್ಯರಿಗಾಗಿ ಕುವೆಂಪು ಮತ್ತು ಶ್ರೀ ರಾಮಾಯಣ ದರ್ಶನಂ

Author : ಗುರುಪಾದ ಮರಿಗುದ್ದಿ

Pages 84

₹ 22.00




Year of Publication: 1993
Published by: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ
Address: ನಿಡಸೋಸಿ

Synopsys

“ಶ್ರೀಸಾಮಾನ್ಯರಿಗಾಗಿ ಕುವೆಂಪು ಮತ್ತು ಶ್ರೀ ರಾಮಾಯಣ ದರ್ಶನಂ” ಕೃತಿ ಮಹಾಕವಿ ಕುವೆಂಪು ಅವರ ಬದುಕು ಮತ್ತು ಮಹಾಕಾವ್ಯ ಕುರಿತಾದ ಪರಿಚಯಾತ್ಮಕ ವಿಶ್ಲೇಷಣೆಯಾಗಿದೆ. ಕುವೆಂಪು ಅವರು ಸೃಷ್ಟಿ ವಿಶ್ವಸಾಹಿತ್ಯದ ಮಟ್ಟದಲ್ಲಿಯೂ ವಿಶಿಷ್ಟವಾಗಿ ನಿಲ್ಲಬಲ್ಲ ಸಾಮರ್ಥ್ಯ ಉಳ್ಳದ್ದು. ಸೃಷ್ಟಿಯ ಹಿಂದೆ ಕೆಲಸ ಮಾಡಿದ ಪ್ರತಿಭೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಈ ಶತಮಾನದ ಮಹಾನ್ ಲೇಖಕರ ಜೊತೆಗಿಟ್ಟು ಅನಿವಾರ್ಯವಾಗಿ ತೂಕಮಾಡಿದಾಗ ಕುವೆಂಪು ಅವರ ಮಹತ್ವ ವಿದಿತವಾದೀತು. ಅವರು ನಂಬಿದ ಉದಾತ್ತ, ಮಾನವೀಯ, ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಆಸಕ್ತಿ ಮೂಡೀತು. ಪರಿಸರ- ವ್ಯಕ್ತಿತ್ವ- ಸಾಹಿತ್ಯ ಕೃತಿ ಇವುಗಳ ಮಧ್ಯ ನಿರಂತರ ನಡೆಯುವ ಪ್ರಕ್ರಿಯೆಯನ್ನು ಗುರುತಿಸುತ್ತ ಮಹಾನ್ ಸಾಧನೆಗೈದ ಕುವೆಂಪು ಅವರ ವಿಶಿಷ್ಟ ಲಕ್ಷಣಗಳನ್ನು ಎತ್ತಿತೋರಿಸುವ ಪ್ರಸ್ತುತ ಕೃತಿ ಆಕರ್ಷಕವಾಗಿದೆ, ಮಾಹಿತಿಪೂರ್ಣವಾಗಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books