ಸ್ತ್ರೀವಾದಿ ಪರಿಕಲ್ಪನೆಗಳು

Author : ಕೆ. ಕೇಶವ ಶರ್ಮ

Pages 480

₹ 350.00




Year of Publication: 2013
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಸ್ತ್ರೀಯರ ಕುರಿತಾದ ಚರ್ಚೆ, ಅಂಶಗಳು ಬಹು ಹಿಂದಿನಿಂದಲೇ ಇರುವಂತದ್ದು. ಸ್ತ್ರೀತ್ವದ ಅಂಶವು ಒಂದು ರೀತಿಯ ವಾದವಾಗಿ, ಕ್ರಿಯಾತ್ಮಕವಾದ ತಿಳುವಳಿಕೆಯ ಭಾಗವಾಗಿ,ಈಚೆಗೆ ಹಲವಾರು ಚರ್ಚೆಗಳು ನಡೆದುಬಂದಿವೆ.

ಸ್ತ್ರೀ ಸಂವೇದನೆಯೆಂದರೆ ಸಾಮಾಜಿಕ, ಆರ್ಥಿಕ, ಹಾಗೂ ಸಾಂಸ್ಕೃತಿಕ ಸಂಗತಿಗಳ ಸ್ವರೂಪವಾಗಿದೆ.  ಸ್ತ್ರೀ ಸಂವೇದನೆಯು ಒಂದು ರೀತಿಯ ಸಂದರ್ಭಗಳಲ್ಲಿ ಕೇವಲ ಭಾವನಾತ್ಮಕವಾದ ಪ್ರಕ್ರಿಯೆಂದು ಭಾವಿಸಲಾಗದು. ಇವುಗಳ ಹಿನ್ನೆಲೆಯಲ್ಲಿ’ಸ್ತ್ರೀವಾದಿ ಪರಿಕಲ್ಪನೆಗಳು’  ಕೃತಿಯು ಬಹಳ ಅಗತ್ಯವಾದ ಅಧ್ಯಯನ ಸಾಮಗ್ರಿಯಾಗಿದೆ.

ಅಗ್ನಿ ಕಾರ್‍ಯ ಮತ್ತು ಸ್ತ್ರೀಯರು, ಅಧಿಪತ್ಯ ಮತ್ತು ಶರಣಾಗತಿ, ಅಡುಗೆ ಮನೆ ಸಾಹಿತ್ಯ, ಅಭಿಸಾರಿಕೆ, ಅನಿಶ್ಚಿತ ಸಿದ್ದಾಂತಗಳು, ಅಶ್ವಮೇಧ ಮತ್ತು ಸ್ತ್ರೀಯರು, ಅಪಹರಣ ವಿವಾಹದಲ್ಲಿ ಸ್ತ್ರೀಯರ ಪ್ರಶ್ನೆ, ಅನೈತಿಕ ಸಂಬಂಧಗಳು ಮತ್ತು ಸ್ತ್ರೀ, ಅಂತರಾಷ್ಟ್ರೀಯತೆ- ಮಹಿಳಾ ಅಸ್ತಿತ್ವ, ಅಂತರ್‍ ಪಠ್ಯ ಮತ್ತು ಸ್ತ್ರೀವಾದಿ ಓದು, ಅಚಾರಿತ್ರಿಕ ವಿಧಾನ ಮತ್ತು ಸ್ತ್ರೀವಾದ ಋತುಸ್ನಾನ, ಋಗ್ವೇದದಲ್ಲಿನ ಸ್ತ್ರಿ ಒಂದು ಉಲ್ಲೇಖ, ಚರಿತ್ರೆಯ  ನಿರ್ಮಾಣ ಮತ್ತು ಸ್ತ್ರೀ, ತಾಯ್ತನದ ಸಾಮಾಜೀಕರಣ, ಹೀಗೆ ಹಲವಾರು ಸೂಕ್ಷ್ಮ ಅಂಶಗಳ ವಿಷಯ ವಸ್ತುಗಳನ್ನು ಗ್ರಹಿಸಿ, ಚಿಂತಕರೂ, ಲೇಖಕರೂ ಆದ ಕೇಶವ ಶರ್ಮರು ಅಧ್ಯಯನ ನಡೆಸಿದ ಚಿಂತನೆಯ ಹಾದಿ ಈ ಕೃತಿಯಲ್ಲಿದೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books