ಸ್ತ್ರೀ ಮನದ ಬಿಂಬ-ಪ್ರತಿಬಿಂಬ

Author : ಕೆ. ಆರ್‌. ಸಂಧ್ಯಾರೆಡ್ಡಿ

Pages 106

₹ 120.00




Published by: ಕರ್ನಾಟಕ ಸಂಘ
Address: ಕರ್ನಾಟಕ ಸಂಘ, ಎಂ.ಎಲ್. ಶ್ರೀಕಂಠೇಗೌಡ ಸಂಶೋಧನ ಕೇಂದ್ರ, ಗುರುಭವನದ ಹಿಂಭಾಗ, ಆರ್.ಪಿ.ರಸ್ತೆ, ಮಂಡ್ಯ-571401
Phone: 08232227755

Synopsys

ಸ್ತ್ರೀವಾದಿ ಚಿಂತಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಮಹಿಳೆಯರ ಬದುಕು-ಬವಣೆಗಳ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸ್ತ್ರೀ ಮನದ ಬಿಂಬ- ಪ್ರತಿಬಿಂಬ ಕೃತಿಯಲ್ಲಿ ಸ್ತ್ರೀ ಶೋಷಣೆಯ ಕುರುಹುಗಳನ್ನು ಜಾನಪದ ಕಾವ್ಯಗಳ ಮೂಲಕ ಉದಾಹರಣೆ ಸಮೇತ ವಿಶ್ಲೇಷಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಅನಾದಿಕಾಲದಿಂದಲೂ ಹೆಣ್ಣನ್ನು ಆಕೆ ಇದ್ದ ಸ್ಥಿತಿಯಲ್ಲೇ ಶೋಷಣೆಗೆ ಈಡುಮಾಡಿದ ಪರಿಯನ್ನು ಲೇಖಕರು ಸರಳವಾಗಿ ಬಿಡಿಸಿಟ್ಟಿದ್ದಾರೆ.

ಪುರಾಣ ಕತೆಗಳು, ಜಾನಪದದಲ್ಲಿ ಮಹಿಳೆಯ ಪರಿಸ್ಥಿತಿ ಹೇಗಿತ್ತು? ಎಂಬುದನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಜಾನಪದ ಸಾಹಿತ್ಯದಲ್ಲಿ ಮಹಿಳೆಯನ್ನು ನೋಡುತ್ತಿದ್ದ ರೀತಿ, ಪುರುಷಾಧಿಪತ್ಯದ ಬೇರುಗಳ ಬಲಿಷ್ಠತೆ ಇವೆಲ್ಲವನ್ನು ಲೇಖಕಿ ಸಂಧ್ಯಾರೆಡ್ಡಿ ಅವರು ವಿವರಿಸಿದ್ದಾರೆ. ಇತಿಹಾಸವೇ ಆಗಲಿ ಇಂದಿನ ವಾಸ್ತವವನ್ನೇ ಆಗಲಿ ಮಹಿಳಾ ದೃಷ್ಠಿಕೋನದಿಂದ ನೋಡಿದಲ್ಲಿ ಅದು ಭಿನ್ನವಾಗಿ ಕಾಣುತ್ತದೆ ಎಂಬುದನ್ನು ಸಂಧ್ಯಾರೆಡ್ಡಿಯವರ ಕೃತಿ ನಿರೂಪಿಸುತ್ತದೆ.

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books