ಸುಬ್ಬಣ್ಣ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 108

₹ 90.00




Year of Publication: 2008
Published by: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್,
Address: ಗವಿಪುರ ಬಡಾವಣೆ, ಬೆಂಗಳೂರು

Synopsys

ಮಾಸ್ತಿಯವರ ಅತ್ಯಂತ ಜನಪ್ರಿಯ ನೀಳ್ಗತೆ ’ಸುಬ್ಬಣ್ಣ’. ಸಂಗೀತಗಾರನ ಬದುಕನ್ನು ಕೇಂದ್ರವಾಗಿಟ್ಟುಕೊಂಡ ಕತೆ. ನವರತ್ನ ರಾಮರಾಯರು ಹೇಳಿದ-ವರ್ಣಿಸಿದ ಸಂಗೀತಗಾರನ ಬದುಕನ್ನು ಆಧರಿಸಿ ಕತೆ ರಚಿಸಿರುವುದಾಗಿ ಮಾಸ್ತಿ ಹೇಳಿಕೊಂಡಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಹಾಗೂ ಸಂಗೀತದ ಬಗೆಗಿನ ಮಾಸ್ತಿಯವರ ಪ್ರೀತಿ-ಆಸ್ಥೆಗಳೆರಡೂ ಹದವಾಗಿ ಬೆರೆತಿವೆ. ಕಥಾನಾಯಕನ ಸಂಗೀತ ಪ್ರತಿಭೆ ಹಾಗೂ ಅವನ ಬದುಕು ನಡೆಸಿದ ಆಟಗಳನ್ನು ಮಾಸ್ತಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಓದಲು ಆರಂಭಿಸಿದ ಮೇಲೆ ಕೆಳಗಿಡದೇ ಮುಗಿಸುವಷ್ಟು ಚೆನ್ನಾಗಿದೆ. ಮೊದಲಿಗೆ ಈ ಕತೆಯು ಪ್ರಬುದ್ದ ಕರ್ನಾಟಕದಲ್ಲಿ ಪ್ರಕಟವಾಗಿತ್ತು. ನಂತರ 1935ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಸುಬ್ಬಣ್ಣ ಮಾಸ್ತಿಯವರ ಯಶಸ್ವಿ ನೀಳ್ಗತೆ.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books