ಸುದ್ದಿ ಸಂವಿಧಾನ

Author : ಎನ್. ಕೆ. ಪದ್ಮನಾಭ

Pages 212

₹ 150.00




Year of Publication: 2019
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ - 577 201
Phone: 9449886390

Synopsys

ಲೇಖಕ ಎನ್.ಕೆ.ಪದ್ಮನಾಭ ಅವರ ಕೃತಿ ’ಸುದ್ದಿ ಸಂವಿಧಾನ’. ಸುದ್ದಿಗೂ ಅದರದ್ದೇ ಆದ ಸಂವಿಧಾನವಿದೆ, ಇದು ಸುದ್ದಿಯ ಸಂರಚನೆಯ ಬಾಹ್ಯ ಸ್ವರೂಪದ ನಿರ್ಧಾರಕ ಅಂಶಗಳನ್ನಷ್ಟೇ ಒಳಗೊಂಡಿರುವುದಿಲ್ಲ. ಬರೆಯುವ, ನಿರೂಪಣೆಯ ಮತ್ತು ಮಾಹಿತಿ ಸಂಗ್ರಹ ಕ್ರಿಯೆಗಳ ಯಾಂತ್ರಿಕ ನೆಲೆಯ ವಿವರಗಳನ್ನಷ್ಟೇ ಆಧರಿಸಿರುವುದಿಲ್ಲ. ಒಂದು ಪೀಳಿಗೆಯ ಪ್ರಜ್ಞೆಯ ಮಟ್ಟ ಎತ್ತರಿಸುವ ವೈವಿಧ್ಯಮಯ ಪಾತ್ರನಿರ್ವಹಣೆಯ ಅನಂತ ಹೊಣೆಗಾರಿಕೆಗಳ ಸಾಧ್ಯತೆಗಳ ತಾತ್ವಿಕ ಶ್ರೇಷ್ಠತೆಯನ್ನು ಮನಗಾಣಿಸುವ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡಿರುತ್ತದೆ. ಈ ದೃಷ್ಟಿಯಿಂದಲೇ ಸುದ್ದಿ ಮಾಧ್ಯಮವನ್ನು ರೂಢಿಸಿಕೊಂಡು ಕ್ರಿಯಾಶೀಲರಾಗ ಬೇಕಾಗುತ್ತದೆ. ಈ ಬಗೆಯ ಪೂರ್ವ ತಯಾರಿಯಿಲ್ಲದಿದ್ದರೆ ಸುದ್ದಿಯ ಸಕಾರಾತ್ಮಕ ಪ್ರಭಾವವನ್ನು ವಿಸ್ತಾರಗೊಳಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಲಾಗದು. ಸುದ್ದಿಯ ಕುರಿತಾದ ಗ್ರಹಿಕೆಗಳೂ ಬದಲಾಗಿ ಮಾಧ್ಯಮಗಳ ವಿತಂಡವಾದಿ ದೃಷ್ಟಿಕೋನ ಗಳನ್ನು ನಿರಾಕರಿಸುವ ಸಾಮೂಹಿಕ ಚಳವಳಿಯೂ ಚಿಗುರಿಕೊಳ್ಳಬೇಕು ಎಂಬ ನಿರೀಕ್ಷೆಯಿಂದ ಈ ಕೃತಿಯನ್ನು ಎನ್.ಕೆ ಪದ್ಮನಾಭ ರೂಪಿಸಿದ್ದಾರೆ.

About the Author

ಎನ್. ಕೆ. ಪದ್ಮನಾಭ

ರಾಯಚೂರು ಜಿಲ್ಲೆಯವರಾದ ಎನ್.ಕೆ. ಪದ್ಮನಾಭ  ಅವರು ಸುದ್ದಿಮೂಲ, ವಿಜಯ ಕರ್ನಾಟಕ, ವಿಜಯ ಟೈಮ್ಸ್, ಹಾಗೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವರದಿಗಾರ, ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿರುವ ಪದ್ಮನಾಭ ಅವರು ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ.  ಟಿ.ಎಸ್. ನಾಗಾಭರಣ ಅವರ ಚಲನಚಿತ್ರಗಳು: ಒಂದು ವಿಶ್ಲೇಷಣಾತ್ಮಕ ಅಧ್ಯಯನ' ...

READ MORE

Related Books