ಸುದ್ದಿಮನೆ ಕತೆ

Author : ವಿಶ್ವೇಶ್ವರ ಭಟ್

Pages 272

₹ 150.00




Year of Publication: 2009
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 0802661 7100

Synopsys

ಹಿರಿಯ ಪತ್ರಕರ್ತ ಲೇಖಕ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳ ಕೃತಿ- ʻಸುದ್ದಿಮನೆ ಕತೆʼ. ಪತ್ರಿಕೆ, ಪತ್ರಕರ್ತರು ಹಾಗೂ ಪತ್ರಿಕೋದ್ಯಮ ಕುರಿತು ಮಾಹಿತಿ ಹೊಂದಿರುವ ಕೃತಿ. ಸಂಪಾದಕ ಚಂದನ್‌ ಮಿತ್ರಾ ಅವರು ಬೆನ್ನುಡಿ ಬರೆದು ‘ಸುದ್ದಿಮನೆ ಕತೆ’ಯಂಥ ಅಂಕಣ ಕನ್ನಡದಲ್ಲೊಂದೇ ಅಲ್ಲ, ಬೇರೆ ಯಾವ ಭಾಷೆಯಲ್ಲೂ ಬಂದಿಲ್ಲವೆಂದು ನನಗನಿಸಿದೆ. ಇದೊಂದು ವಿನೂತನ ಪ್ರಯೋಗ. ಪತ್ರಿಕೆ, ಪತ್ರಕರ್ತರು, ಸುದ್ದಿಸಂಗ್ರಹದ ಸವಾಲು, ಸುದ್ದಿಮನೆಯೊಳಗಿನ ಹಾಸ್ಯ ಪ್ರಸಂಗ, ಪತ್ರಕರ್ತನ ಸಾಹಸ, ಹುಚ್ಚಾಟ, ತಿಕ್ಕಲುತನ, ಶಾಣ್ಯಾತನ ಹೀಗೆ ಪತ್ರಿಕೋದ್ಯಮದ ಎಲ್ಲ ಮುಖಗಳನ್ನು ತೆರೆದಿಡುವ ಈ ಅಂಕಣ ಕೇವಲ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಎಲ್ಲರಿಗೂ ರುಚಿಸುವಂಥದು. ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕೈ ದೀವಿಗೆ. ಪತ್ರಕರ್ತನಿಗೆ ಕೈಪಿಡಿ. ಪತ್ರಿಕಾ ವೃತ್ತಿಯನ್ನು ವಿಭಿನ್ನವಾಗಿ ನೋಡಿದ ಮೊದಲ ಪ್ರಯತ್ನವಿದುʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books