ಸುಗುಟೂರು ವೀರಶೈವ ಅರಸು ಮನೆತನ

Author : ಪಿ.ವಿ.ಕೃಷ್ಣಮೂರ್ತಿ

Pages 163

₹ 40.00




Year of Publication: 1994
Published by: ಪ್ರಸಾರಾಂಗ
Address: ನಿರ್ದೇಶಕರು,, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ -3

Synopsys

ಸುಗುಟೂರು ವೀರಶೈವ ಅರಸು ಮನೆತನ- ಲೇಖಕ ಡಾ. ಪಿ.ವಿ.ಕೃಷ್ಣಮೂರ್ತಿ ಅವರ ಐತಿಹಾಸಿಕ ಸಂಶೋಧನಾ ಕೃತಿ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 15ನೆಯ ಮೃತ್ಯುಂಜಯ ವಿಶೇಷ ವ್ಯಾಖ್ಯಾನಮಾಲೆಯಲ್ಲಿ (1994 ಜನೆವರಿ 27 ಮತ್ತು 28 ) ಲೇಖಕರು ನೀಡಿದ ಮೂರು ವಿಶೇಷ ಉಪನ್ಯಾಸಗಳ ಲಿಖಿತ ರೂಪವೇ ಈ ಕೃತಿ.

ಇತಿಹಾಸ ಸಂಶೋಧಕರು ಉಪೇಕ್ಷಿತ ಅರಸುಮನೆತನಗಳ ಕುರಿತು ಅವರು ನಡೆಸಿದ ಸಂಶೋಧನೆ, ಪ್ರಕಟಿಸಿದ ಲೇಖನಗಳು ಇತಿಹಾಸಜ್ಞರ ಗಮನ ಸೆಳೆದಿವೆ. "ಸುಗುಟೂರು ವೀರಶೈವ ಅರಸು ಮನೆತನ".ಎಂಬುದು ಅಂಥ ಒಂದು ಅಲಕ್ಷಿತ ಅರಸುಮನೆತನವಾಗಿದೆ, ವ್ಯಾಪಕವಾದ ಕ್ಷೇತ್ರಕಾರ್ಯ, ಉತ್ಕಟವಾದ ಶ್ರದ್ಧೆ - ಶ್ರಮಗಳಿಂದ ಸಿದ್ಧಪಡಿಸಿದ ಈ ಪ್ರಬಂಧ ಈ ಅರಸುಮನೆತನದ ಬಗೆಗೆ ಪ್ರಥಮವಾಗಿ ಅನೇಕ ಹೊಸ ಸಂಗತಿಗಳನ್ನು ಬೆಳಕಿಗೆ ತಂದಿದೆ.

ಶಾಸನ, ಕಾವ್ಯ, ಐತಿಹ್ಯ ಮೊದಲಾದ ಆಕರ ಸಾಮಗ್ರಿಗಳ ಹಿನ್ನೆಲೆಯಲ್ಲಿ ಈ ಅರಸುಮನೆತನದ ಸಮಗ್ರ ಚರಿತ್ರೆಯನ್ನು ಮೊದಲಬಾರಿಗೆ ರಚಿಸಿಕೊಟ್ಟ ಕೀರ್ತಿ ಇವರದು. ಅಧ್ಯಯನದ ಆಕರಗಳು, ಪ್ರಾದೇಶಿಕ ವ್ಯಾಪ್ತಿ, ಚಾರಿತ್ರಿಕ ಹಿನ್ನೆಲೆ , ವಂಶದ ಮೂಲ ಮತ್ತು ಮೂಲಪುರುಷ, ಅರಸರು ಹಾಗೂ ಪುಂಗನೂರು ಸಂಸ್ಥಾನದ ಪ್ರಭುಗಳ ಬಗ್ಗೆ, ಆಡಳಿತ ವಿಭಾಗಗಳು, ಆಡಳಿತ ಕ್ರಮ, ದೇವಾಲಯಗಳ ರಚನೆ, ಜೀರ್ಣೋದ್ದಾರ, ಪೂಜಾಕೈಂಕರ್ಯ, ಮಠಮಾನ್ಯಗಳು, ಅಗ್ರಹಾರಗಳು, ಯಜ್ಞ ಯಾಗಾದಿಗಳು ಅಲ್ಲದೆ ಅವರ ಎಲ್ಲ ಶಾಸನಗಳನ್ನು ಇಲ್ಲಿ ಸಂಪಾದಿಸಿ ಕೊಡಲಾಗಿದೆ.

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books