ಸೂಕ್ತಿ-ಸಪ್ತತಿ

Author : ಎಸ್‌.ಆರ್‌. ರಾಮಸ್ವಾಮಿ

Pages 150

₹ 75.00




Year of Publication: 2010
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಸೂಕ್ತಿ-ಸಪ್ತತಿ ಸುಭಾಷಿತ ಸಂಗ್ರಹ ಕೃತಿಯನ್ನು ಲೇಖಕ ಎಸ್.ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ’ಸುಭಾಷಿತಗಳು’ ಸಂಸ್ಕೃತ ಸಾಹಿತ್ಯದ ಒಂದು ಪ್ರಮುಖ ಅಂಗ. ಲೋಕಾನುಭವವನ್ನು ಅಥವಾ ಉನ್ನತಿಯ ಪಥವನ್ನು ಅತ್ಯಂತ ಕಡಮೆ ಶಬ್ದಗಳಲ್ಲಿ ಮತ್ತು ಸ್ಮರಣೀಯ ಶೈಲಿಯಲ್ಲಿ ಸಂಗ್ರಹಿಸಿರುವ ಉಕ್ತಿಗಳು ’ಸು-ಭಾಷಿತ’ಗಳೆನಿಸಿವೆ. ಇವಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ’ಗಾದೆಮಾತು’ಗಳೆಂದು ಪ್ರಸಿದ್ದಿ ಪಡೆದಿವೆ. ಈ ಸುಭಾಷಿತಗಳು ಬದುಕಿನ ವಿವಿಧ ಮುಖಗಳನ್ನು ಪ್ರತಿಬಿಂಬಿಸುವವು ಮಾತ್ರವಲ್ಲದೆ ನೀತಿಬೋಧಕವೂ ಆಗಿವೆ. ಇಂತಹ ಹಲಕೆಲವು ವಿರಳ ಶ್ಲೋಕಗಳನ್ನು ಆಯ್ದು, ಅವುಗಳ ಅರ್ಥಸ್ವಾರಸ್ಯದ ಜೊತೆಗೆ ಬದುಕಿಗೆ ಮಾರ್ಗದರ್ಶಿಯೂ ನೀತಿಬೋಧಕವೂ ಆಗುವಂತೆ ಘಟನೆಗಳ ಉದಾಹರಣೆಗಳೊಂದಿಗೆ ಮನಮುಟ್ಟುವಂತೆ ಶ್ಲೋಕಾರ್ಥವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿರುವ ವಿಭಿನ್ನ ಶೈಲಿಯ ಪುಸ್ತಿಕೆ – ’ಸೂಕ್ತಿ ಸಪ್ತತಿ’.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books